ಬೆಡಸಗಾಂವ ಬಳಿ ಹುಲಿ ತಿರುಗಾಟ

Share Now

Share Now      ಮುಂಡಗೋಡ : ತಾಲೂಕಿನ ಬೆಡಸಗಾಂವ ಊರ ಬಳಿಯೇ ಹುಲಿ ತಿರುಗಾಟ ನಡೆಸಿದೆ. ಹುಲಿಯು ಗ್ರಾಮದ ಬಳಿಯೇ ತಿರುಗಾಡುತ್ತಿರುವ ಬಗ್ಗೆ ಕೆಲವರು ಭಯಭೀತರಾದರೆ ಮತ್ತೆ ಕೆಲವರು ಇದು ಈ ಭಾಗದಲ್ಲಿ `ಕಾಮನ್’ ಎನ್ನುತ್ತಿದ್ದಾರೆ. ಬೆಡಸಗಾಂವ ಗ್ರಾಮಕ್ಕೆ ಹೋಗುವ ದಾರಿ ದಟ್ಟ ಅರಣ್ಯದಿಂದ ಕೂಡಿದ್ದು, ಜನರು ಸೈಕಲ್, ಬೈಕ್ ಮೇಲೆ ಇನ್ನು ಕೆಲವರು ನಡೆದುಕೊಂಡು ಹೋಗುತ್ತಾರೆ. ಆದ್ದರಿಂದ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

Read More

ಕಾತೂರ ಶಾಲೆಯಲ್ಲಿ ವನಮಹೋತ್ಸವ : ಸಸಿ ನೆಟ್ಟ ಎಂ.ಎಲ್.ಸಿ.

Share Now

Share Now      ಮುಂಡಗೋಡ : ತಾಲೂಕಿನ ಕಾತೂರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಇಂದು ವನಮಹೋತ್ಸವ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಂ.ಎಲ್.ಸಿ. ಶಾಂತಾರಾಮ ಸಿದ್ದಿ ಅವರು ಸಸಿ ನೆಟ್ಟರು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪ್ರಕಾಶ ಅಜ್ಜಮ್ಮನವರ್, ಕಾತೂರ ಗ್ರಾ.ಪಂ.ಅಧ್ಯಕ್ಷೆ ರೇಣುಕಾ ಮಾಯಣ್ಣವರ್, ನಾಗನೂರ ಗ್ರಾ.ಪಂ. ಅಧ್ಯಕ್ಷ ಸುನೀಲ ಶಳಕೆ, ಕಾತೂರ ಸೊಸೈಟಿ ಅಧ್ಯಕ್ಷ ಶಿವಾಜಿ ಸಿಂಧೆ, ಉಪವಲಯ ಅರಣ್ಯಾಧಿಕಾರಿ ನಾಗರಾಜ ಕಲಾಲ ಮುಂತಾದವರಿದ್ದರು.

Read More

ಅಂಗನವಾಡಿ ಕಾರ್ಯಕರ್ತೆಯರಿಂದ ಮನವಿ

Share Now

Share Now      ಮುಂಡಗೋಡ : ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಫೆಡರೇಶನ್ ಕರೆ ಮೇರೆಗೆ ಇಂದು ಮುಂಡಗೋಡ ತಾಲೂಕ ಅಂಗನವಾಡಿ ಕಾರ್ಯಕರ್ತೆಯರು ತಹಶೀಲದಾರ ಮೂಲಕ ಪ್ರಧಾನಮಂತ್ರಿಗಳಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಅರ್ಪಿಸಿದರು. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸುರಕ್ಷತಾ ಗೇರ್, ಅಪಾಯ ಭತ್ಯೆ ಮತ್ತು ವಿಮಾ ರಕ್ಷಣೆ ನೀಡಬೇಕು. ಅಂಗನವಾಡಿ ಕಾರ್ಯಕರ್ತ ಮತ್ತು ಸಹಾಯಕಿಯರನ್ನು ಕಾಯಂಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ಮತ್ತು ಸಾಮಾಜಿಕ…

Read More

ಅಣ್ಣನಿಂದ ತಮ್ಮನ ಬರ್ಬರ ಹತ್ಯೆ

Share Now

Share Now      ಹೊನ್ನಾವರ : ಅಣ್ಣ ತಮ್ಮಂದಿರ ಜಗಳದಲ್ಲಿ ತಮ್ಮನ ತಲೆಗೆ ಕತ್ತಿಯಿಂದ ಬಲವಾಗಿ ಹೊಡೆದು ಅಣ್ಣ ಕೊಲೆ ಮಾಡಿರುವ ಘಟನೆ ತಡರಾತ್ರಿ ಹೊನ್ನಾವರದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ಅರ್ಜುನ್ ಶಂಕರ ಮೇಸ್ತ (23) ಎಂದು ಗುರುತಿಸಲಾಗಿದೆ. ಹೊನ್ನಾವರ ಪಟ್ಟಣದಿಂದ ತಾರೀಬಾಗಿಲಿಗೆ ಹೋಗುವ ಚರ್ಚ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ 23 ವರ್ಷದ ಅರ್ಜುನ್ ಮೇಸ್ತ ಎಂಬ ಯುವಕನ ತಲೆಗೆ ಕತ್ತಿಯಿಂದ ಭೀಕರವಾಗಿ ಹೊಡೆದು,ಕೋಣೆಯೊಂದರಲ್ಲಿ ಕೂಡಿ ಹಾಕಿ ಅಣ್ಣ ಪರಾರಿಯಾಗಿದ್ದ ಎನ್ನಲಾಗಿದೆ. ತಾಯಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದ್ದು,ಮನೆಯ ಅಕ್ಕ…

Read More

ಹನಿಗವನಗಳು

Share Now

Share Now      ಕೆಲಸ ಆಶ್ವಾಸನೆಗಳ ಕೊಡೋದಷ್ಟೇ ಅಲ್ಲ, ರಾಜಕಾರಣಿಗಳ ಕೆಲಸ, ಕೊಟ್ಟ ಆಶ್ವಾಸನೆಗಳ ಮರೆಯುವುದೂ ಅವರದೇ ಕೆಲಸ!     * * * * * ಕಟ್ಟೋಣ ಕಟ್ಟುವುದು ಬೇಡ ಅಲ್ಲಿ ಮಸೀದಿ ಮಂದಿರ, ಕಟ್ಟೋಣ ನಾವಿಲ್ಲಿ ಮನೋಮಂದಿರ, ಆದೀತು ಆಗ  ಈ ಜಗ  ಸುಂದರ. ~ ಶಿವಪ್ರಸಾದ ಹಾದಿಮನಿ, ಕೊಪ್ಪಳ

Read More

ಪ.ಪಂ. ಮುಖ್ಯಾಧಿಕಾರಿ ವರ್ಗಾವಣೆ

Share Now

Share Now      ಮುಂಡಗೋಡ : ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯ ಅವರಿಗೆ ಬೆಳಗಾವಿ ಜಿಲ್ಲೆಯ ಮುನವಳ್ಳಿ ಪುರಸಭೆಯ ಮುಖ್ಯಾಧಿಕಾರಿಯಾಗಿ ವರ್ಗಾವಣೆಯಾಗಿದೆ.     ಸಂಗನಬಸಯ್ಯ ಅವರು ಕಳೆದ 6 ವರ್ಷದಿಂದ ಮುಂಡಗೋಡ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಯಾಗಿ ಉತತಮವಾಗಿ ಕಾರ್ಯ ನಿರ್ವಹಿಸಿ ಜನಮನ್ನಣೆ ಗಳಿಸಿದ್ದಾರೆ.

Read More

ಮೀನುಗಾರರಿಗೆ ಸಲಕರಣೆ ಕಿಟ್ ವಿತರಣೆ

Share Now

Share Now      ಮುಂಡಗೋಡ : 15 ಜನ ಮೀನುಗಾರರಿಗೆ ಇಂದು ಮೀನು ಹಿಡಿಯುವ ಸಲಕರಣೆಗಳ ಉಚಿತ ಕಿಟ್ ನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ವಿತರಿಸಿದರು.     ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯರಾದ ಎಲ್. ಟಿ.ಪಾಟೀಲ್ , ರವಿ ಗೌಡ ಪಾಟೀಲ್, ಮುಖಂಡರಾದ ಫಣಿರಾಜ ಹದಳಗಿ, ಗುಡ್ಡಪ್ಪಾ ಕಾತೂರ, ತಾಲೂಕಾ ಬಿ.ಜೆ.ಪಿ. ಅಧ್ಯಕ್ಷ ನಾಗಭೂಷಣ ಹಾವಣಗಿ, ಪ.ಪಂ. ಉಪಾಧ್ಯಕ್ಷ ಮಂಜುನಾಥ ಹರಮಲಕರ, ಉಮೇಶ ಬಿಜಾಪುರ, ಅಲ್ಲಿಖಾನ ಪಠಾಣ, ಸಹಾಯಕ ಮೀನುಗಾರಿಕಾ ನಿರ್ದೇ‍ಶಕ ವೈಭವ ಮುಂತಾದವರಿದ್ದರು.

Read More

ಹೆಬ್ಬಾರ್ ರೇಶನ್ ಕಿಟ್ ವಿತರಣೆ

Share Now

Share Now      ಮುಂಡಗೋಡ : ಈಗ ನೀವು ಸಂಕಷ್ಟದಲ್ಲಿದ್ದಾಗ ಭಾಗಿಯಾಗುವುದು ನನ್ನ ಕರ್ತವ್ಯ. ಅದಕ್ಕಾಗಿ 63ಸಾವಿರ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‍ದಾರರಿಗೆ ದಿನಸಿ ಕಿಟ್‍ಗಳನ್ನು ಸ್ವಂತ ಖರ್ಚಿನಿಂದ ನೀಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಇಂದು ಹೇಳಿದರು.     ಅವರು ಮುಂಡಗೋಡ ನಗರದಲ್ಲಿ ಹೆಬ್ಬಾರ ರೇಶನ ಕಿಟ್‍ಗಳನ್ನು ವಿತರಿಸಿ ಮಾತನಾಡುತ್ತಿದ್ದರು.  ಯಾವದೇ ಜಾತಿ ಮತ, ಪಕ್ಷ ಬೇಧ ಭಾವವಿಲ್ಲದೇ ಎಲ್ಲ ಬಿಪಿಎಲ್ ಕಾರ್ಡ್‍ದಾರರಿಗೂ ಕಿಟ್‍ಗಳನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.    ಈ…

Read More