ಮುಂಡಗೋಡ : ಕಾಡಿನಿಂದ ನಾಡಿಗೆ ಬಂದ ಜಿಂಕೆಯನ್ನು ನಾಯಿಗಳಿಂದ ಗ್ರಾಮಸ್ಥರು ರಕ್ಷಿಸಿ, ಜಿಂಕೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ತಾಲೂಕಿನ ಪಾಳಾ ಗ್ರಾಮದಲ್ಲಿ ಇಂದು ಸಂಭವಿಸಿದೆ.
ನಾಡಿಗೆ ಬಂದ ಜಿಂಕೆಯನ್ನು ನಾಯಿಗಳಿಂದ ಚಂದ್ರ ಗೌಡ, ಶಿವನ ಗೌಡ್ರು, ಬಸವನಗೌಡ ಪಾಟೀಲ್ ಸೇರಿದಂತೆ ಅನೇಕ ಗ್ರಾಮಸ್ಥರು ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.