Headlines

33 ವರ್ಷದ ನಂತರ ವಿಜೃಂಭಣೆಯಿಂದ ಜರುಗಿದ ಶ್ರೀ ಬಸವಣ್ಣ ಶ್ರೀ ವೀರಭದ್ರೇಶ್ವರ ರಥೋತ್ಸವ

ಮುಂಡಗೋಡ : ಕಳೆದ 33 ವರ್ಷದ ನಂತರ ಶ್ರೀ ಬಸವಣ್ಣ ಮತ್ತು ಶ್ರೀ ವೀರಭದ್ರೇಶ್ವರ ರಥೋತ್ಸವ ವಿಜೃಂಭಣೆಯಿಂದ ರವಿವಾರ ಜರುಗಿತು.  ಶ್ರೀಗಳ ಅಮೃತ ಹಸ್ತದಿಂದ ಹಾಗೂ ಗಣ್ಯರಿಂದ ನೂತನ ರಥದ ಲೋಕಾರ್ಪಣೆಗೊಂಡಿತು. ನಂತರ ವಾದ್ಯ ವೈಭವಗಳೊಂದಿಗೆ ರಥೋತ್ಸವವು ಬನ್ನಿ ಮಹಾಂಕಾಳಿ ದೇವಿಯ ದೇವಸ್ಥಾನದವರೆಗೂ ಭಕ್ತವೃಂದದೊಂದಿಗೆ ಸಾಗಿತು.ಈ ವಿಜೃಂಭಣೆಯ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

Read More

ಶ್ರೀ ರಾಮನವಮಿ ಆಚರಣೆಯ ಮಹತ್ವವೇನು…..?

ಹಿಂದೂ ಹಬ್ಬಗಳಲ್ಲಿ ರಾಮನವಮಿಯೂ ಕೂಡ ಒಂದು ಪ್ರಮುಖವಾದ ಹಬ್ಬ. ರಾಮನವಮಿಯನ್ನು ಶ್ರೀ ರಾಮನ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಲ್ಲಿ ಅಂದರೆ ಚೈತ್ರ ಮಾಸದ ಒಂಬತ್ತನೇ ದಿನದಂದು ಶ್ರೀ ರಾಮನವಮಿ ಆಚರಿಸಲಾಗುತ್ತದೆ. ಅಥವಾ ಯುಗಾದಿ ಹಬ್ಬದ ಎಂಟು ದಿನಗಳ ನಂತರ ರಾಮನವಮಿ ಆಚರಿಸಲಾಗುತ್ತದೆ.  ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಶ್ರೀರಾಮ ಜನಿಸಿದ್ದು, ಏ.5 ರಂದು ಸಂಜೆ 7: 26ಕ್ಕೆ ತಿಥಿ ಪ್ರಾರಂಭವಾಗಿ ಏ.6 ರಂದು ಸಂಜೆ 7:22 ಕ್ಕೆ ಕೊನೆಗೊಳ್ಳುತ್ತದೆ….

Read More

ದೇಶದ ಜನತೆಗೆ ಶ್ರೀರಾಮನವಮಿ ಶುಭಾಶಯ ತಿಳಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶ್ರೀರಾಮನವಮಿ ಶುಭಾಶಯ ತಿಳಿಸಿದ್ದಾರೆ. ಶ್ರೀರಾಮನ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸಿದ್ದಾರೆ. ಶ್ರೀರಾಮನವಮಿ ಹಿನ್ನೆಲೆಯಲ್ಲಿ ಎಕ್ಸ್‌ ಪೋಸ್ಟ್‌ ಹಾಕಿದ ಮೋದಿ, ಎಲ್ಲರಿಗೂ ರಾಮ ನವಮಿಯ ಶುಭಾಶಯಗಳು. ಪ್ರಭು ಶ್ರೀರಾಮನ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ ಮತ್ತು ನಮ್ಮ ಎಲ್ಲಾ ಪ್ರಯತ್ನಗಳಲ್ಲಿ ನಮಗೆ ಮಾರ್ಗದರ್ಶನ ನೀಡಲಿ. ಇಂದು ತಡವಾಗಿ ರಾಮೇಶ್ವರಂನಲ್ಲಿ ಇರಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Read More

ಕವನ ಸಂಕಲನ “ಕೇಳು ಮನುಜ” ಲೋಕಾರ್ಪಣೆ

ಮುಂಡಗೋಡ : ಕನ್ನಡ ಸಾಹಿತ್ಯ ಪರಿಷತ್ತು  ತಾಲೂಕು ಘಟಕ ಮುಂಡಗೋಡ  ಹಾಗೂ ಶ್ರೀ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ಇಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಕಾಂತ್ ಚನ್ನಪ್ಪ ಹೊಂಡದಕಟ್ಟಿ ಅವರು ಸ್ವರಚಿತ ಕವನ ಸಂಕಲನ ಕೇಳು ಮನುಜ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವು ತಾಲೂಕಿನ ಇಂದೂರಿನ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವದಲ್ಲಿ ನಡೆಯಿತು.  ಈ ಕಾರ್ಯಕ್ರಮವನ್ನು ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್  ಅಧ್ಯಕ್ಷರಾದ  ವಿರುಪಾಕ್ಷಿ ಗೌಡ ಪಾಟೀಲ್ ಉದ್ಘಾಟಿಸಿದರು.  ಕೇಳು ಮನುಜ ಪುಸ್ತಕನ್ನು  ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮು ಬೈಲಸೀಮಿ ಬಿಡುಗಡೆ…

Read More

ಉದ್ಯೋಗ ಖಾತ್ರಿ ಯೋಜನೆಯನ್ನು ಅರಣ್ಯ ಇಲಾಖೆಯವರು ಸದ್ಬಳಕೆ ಮಾಡಿಕೊಳ್ಳುವಂತೆ ಜಿ.ಪಂ. ಸಿಇಒ ಈಶ್ವರ ಕಾಂದೂ ಕರೆ

ಮುಂಡಗೋಡ : ಅರಣ್ಯ ಇಲಾಖೆಯವರು ಉದ್ಯೋಗ ಖಾತ್ರಿ ಯೋಜನೆಯನ್ನು ಹೆಚ್ಚು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಅರಣ್ಯ ಬೆಳಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಈಶ್ವರ ಕಾಂದೂ ಕರೆ ನೀಡಿದರು.  ತಾಲೂಕಾ ಪಂಚಾಯತ ಸಭಾಭವನದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುಕೂಲತೆಯಿದೆ. ಆದರೆ ಅರಣ್ಯ ಇಲಾಖೆಯವರು ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಉದ್ಯೋಗ…

Read More

ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪಟ್ಟಣ ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಪ್ರತಿಭಟನೆ..!

ಮುಂಡಗೋಡ : ಪಟ್ಟಣದ ಸರ್ವೆ ನಂಬರ್ 186 ರ ಗಾಂಧಿ ನಗರ ಪ್ರದೇಶವನ್ನು ಸುಳ್ಳು ಹಾಗೂ ತಪ್ಪು ಮಾಹಿತಿ ನೀಡಿ, ಸ್ಲಂ ಅಂತಾ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿ ಮುಂಡಗೋಡ ಪಟ್ಟಣ ಪಂಚಾಯತ್ ಹಾಗೂ ಸ್ಲಂ ಬೋರ್ಡ್ ಬೆಳಗಾವಿ ವಿರುದ್ಧ ಗಾಂಧಿನಗರದ ಅಭಿವೃದ್ಧಿ ಸಮಿತಿಯವರು ಹಾಗೂ ಗಾಂಧಿನಗರದ ನಿವಾಸಿಗಳು ಶನಿವಾರ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.  ಗಾಂಧಿನಗರವನ್ನು ಸ್ಲಂ ಬೋರ್ಡ್ ಅಂತಾ ಮಾಡಿರುವುದನ್ನು ಕೂಡಲೇ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿ, ಗಾಂಧಿನಗರ ನಿವಾಸಿಗಳು,  ಗಾಂಧಿನಗರದಿಂದ ಪಟ್ಟಣ ಪಂಚಾಯತಿವರೆಗೂ ಶಾಂತಿಯುತವಾಗಿ ಪ್ರತಿಭಟನಾ…

Read More

ವಿದ್ಯುತ್ ಹರಿದು ಕಾರ್ಮಿಕ ಸಾವು… ಮತ್ತೊಬ್ಬನ ಸ್ಥಿತಿ ಗಂಭೀರ

ಮುಂಡಗೋಡ : ಶುಂಠಿ ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ಕೂಲಿ ಕಾರ್ಮಿಕನೊಬ್ಬನಿಗೆ ವಿದ್ಯುತ್ ಹರಿದ ಪರಿಣಾಮವಾಗಿ ಮೃತಪಟ್ಟರೆ ಮತ್ತೊಬ್ಬನಿಗೆ ಗಂಭೀರ ಗಾಯವಾದ ಘಟನೆ ಮುಂಡಗೋಡ ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ನಡೆದಿದೆ.  ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಬಸವರಾಜ ಚಂದ್ರಪ್ಪ ಹರಿಜನ ವಿದ್ಯುತ್ ದುರಂತದಲ್ಲಿ ಜೀವ ಕಳೆದುಕೊಂಡ ನತದೃಷ್ಟನಾಗಿದ್ದಾನೆ. ಹರೀಶ ರಾಮಣ್ಣ ಹರಿಜನ ಗಾಯಗೊಂಡವನಾಗಿದ್ದಾನೆ.  ಪಾಳಾ ಗ್ರಾಮದ ಮೂಕಪ್ಪ ಹರಿಜನ್ ಎಂಬಾತ, ಓಣಿಕೇರಿ ಗ್ರಾಮದಲ್ಲಿ ಬೇರೋಬ್ಬರ ಜಮೀನನ್ನು ಲಾವಣಿ ಮೇಲೆ ಪಡೆದು ಶುಂಠಿ ಕೃಷಿ ಮಾಡುತ್ತಿದ್ದಾರೆ. ಹೀಗಾಗಿ, ಶುಕ್ರವಾರ…

Read More

ಮನೆ ಹಿಂಭಾಗದಲ್ಲಿ ಅಡಗಿದ್ದ ನಾಗರಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿಗಳು

ಮುಂಡಗೋಡ : ಪಟ್ಟಣದ ಕಂಬಾರಗಟ್ಟಿ ಪ್ಲಾಟನ ಮನೆಯೊಂದರ ಹಿಂಭಾಗದಲ್ಲಿ ಅಡಗಿ ಕುಳಿತಿದ್ದ ನಾಗರಹಾವನ್ನು ಅರಣ್ಯ ಸಿಬ್ಬಂದಿಗಳು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆಯೊಂದು ಶುಕ್ರವಾರ ನಡೆದಿದೆ. ಪಟ್ಟಣ ಪಂಚಾಯಿತಿಯ ನಿವೃತ್ತ ಅಧಿಕಾರಿ ರುದ್ರಯ್ಯ ಬಿ.ಹಿರೇಮಠ ಅವರ ಮನೆಯ ಹಿಂಭಾಗದಲ್ಲಿ ಅಡಗಿ ಕುಳಿತ ನಾಗರಹಾವನ್ನು ಅರಣ್ಯ ಸಿಬ್ಬಂದಿಗಳು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.ನಾಗರಹಾವನ್ನು ಕಾಡಿಗೆ ಬಿಡುವ ಮೊದಲು ನಾಗರಹಾವಿದ್ದ ಪೆಟ್ಟಿಗೆಗೆ ರುದ್ರಯ್ಯ ಹಿರೇಮಠ ಅವರ ಕುಟುಂಬದವರು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. 

Read More

ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಘಟನೆ : ಮುಂಡಗೋಡ ಬಿಜೆಪಿ ತೀವ್ರ ಖಂಡನೆ

ಮುಂಡಗೋಡ : ಕಿರವತ್ತಿ ಬಳಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಘಟನೆಯನ್ನು ಮುಂಡಗೋಡ ತಾಲೂಕಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.  ಅತ್ಯಾಚಾರಿ ಅನ್ಯಕೋಮಿನ ಯುವಕನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ತಾಲೂಕಾ ಅಧ್ಯಕ್ಷರಾದ ಮಂಜುನಾಥ ಪಾಟೀಲ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಎಲ್.ಟಿ.ಪಾಟೀಲ್ ಮತ್ತು ಅಶೋಕ ಚಲವಾದಿ ಅವರು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಭರತರಾಜ ಹದಳಗಿ, ಬಸವರಾಜ ಟಣಕೆದಾರ, ಕುಮಾರ ತಳವಾರ, ಮಂಜುನಾಥ ಎಚ್.ಪಿ., ಬಾಬು ವಾಲ್ಮೀಕಿ, ಗುರು ಕಾಮತ್, ಅಣ್ಣಪ್ಪ…

Read More

ಅನಧಿಕೃತವಾಗಿ ನಡೆಸುತ್ತಿರುವ ಕ್ಲಿನಿಕ್ ಗಳ ಮೇಲೆ ಮುಂಡಗೋಡ ಕೆ.ಪಿ.ಎಂ.ಇ. ಪ್ರಾಧಿಕಾರದಿಂದ ದಾಳಿ

ಮುಂಡಗೋಡ : ಶ್ರೀ ಚನ್ನಬಸವೇಶ್ವರ ಮೆಡಿಕಲ್ & ಜನರಲ್ ಸ್ಟೋರ್ಸ್ ಮಳಗಿ, ಶ್ರೀ ರೇಣುಕಾ ಮೆಡಿಕಲ್ & ಮೆಡಿಕಲ್ ಸ್ಟೋರ್ಸ್ ಮಳಗಿ, ಕೋಡಂಬಿಯಲ್ಲಿ ಅಹ್ಮದಸಾಬ್ ಎಂಬುವರು ತಮ್ಮ ಮನೆಯ ಪಕ್ಕದಲ್ಲಿ ನಡೆಸುತ್ತಿದ್ದ ಕ್ಲಿನಿಕ್, ಶ್ರೀ ಗುರು ಕ್ಲಿನಿಕ್, ಡಾ.ಅಮರ್ ಶಿಂಧೆ ಇವರು ಕೊಡಂಬಿ ಮತ್ತು ಪಾಳಾ ಹಾಗು ತಮ್ಮ ಮನೆಯಲ್ಲಿ ನಡೆಸುತ್ತಿದ್ದ ಕ್ಲಿನಿಕ್, ಆರ್.ಜಿ.ಪೂಜಾರ್ ನಡೆಸುತ್ತಿದ್ದ ಧನ್ವಂತರಿ ಕ್ಲಿನಿಕ್ ಕಾತೂರ್, ಗೋಪಾಲ ಬೆನ್ನೂರ್ ಗಣೇಶಪುರದ ಬಾಡಿಗೆ ಮನೆಯಲ್ಲಿ ನಡೆಸುತ್ತಿದ್ದ ಕ್ಲಿನಿಕ್ ಹಾಗು ಬಸವರಾಜ ಹಡಪದ ಕಾವಲಕೊಪ್ಪದಲ್ಲಿ ನಡೆಸುತ್ತಿದ್ದ…

Read More