ಮುಂಡಗೋಡ : ಕಂಬಾರ ಗಟ್ಟಿ ಕೆರೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಎರಡು ಜಿಂಕೆಗಳನ್ನು ಯುವಕರು ಹಿಡಿದು ಕಾಡಿಗೆ ಬಿಟ್ಟ ಘಟನೆ ಇಂದು ಜರುಗಿದೆ.
ಆಹಾರ ಅರಸುತ್ತಾ ಪಟ್ಟಣಕ್ಕೆ ಬಂದ ಜಿಂಕೆಗಳನ್ನು ನಾಯಿಗಳು ಬೆನ್ನಟ್ಟಿದ್ದ ರಿಂದ ಈ ಜಿಂಕೆಗಳು ಪ್ರಾಣಭಯದಿಂದ ಓಡಲುಹೋಗಿ ಕೆರೆಯ ಕೆಸರಲ್ಲಿ ಸಿಲುಕಿಕೊಂಡಿತು.
ಬಳ್ಳಿಗಳು ಕೆರೆಯಲ್ಲಿ ಇದ್ದುದ್ದರಿಂದ ಜಿಂಕೆಗಳು ಹೊರ ಬರಲಾಗದೆ ಒದ್ದಾಡಿದವು.
ನಂತರ ಯುವಕರು ತುಂಬಾ ಪ್ರಯಾಸದಿಂದ ಜಿಂಕೆಯನ್ನು ಕೆರೆಯಿಂದ ಮೇಲೆತ್ತಿ ರಕ್ಷಿಸಿದಾಗ ಜಿಂಕೆಗಳು ಬದುಕಿದೆಯಾ ಬಡಜೀವವೇ ಎಂದು ಕಾಡಿನೊಳಗೆ ಓಡಿಹೋಯಿತು.