ಇಂದೂರ ಜಿ.ಪಂ. ಕ್ಷೇತ್ರ : ರವಿಗೌಡ ಪಾಟೀಲರಿಗೆ ಟಿಕೆಟ್ ನೀಡುವಂತೆ ಆಗ್ರಹ

Spread the love

ಮುಂಡಗೋಡ : ಚುನಾವಣಾ ಆಯೋಗವು ತಾ.ಪಂ., ಜಿ.ಪಂ. ಮೀಸಲಾತಿ ಪ್ರಕಟಿಸುತ್ತಿದ್ದಂತೆ ರಾಜಕೀಯ ಪಕ್ಷದಲ್ಲಿ ಚಟುವಟಿಕೆ ತೀವ್ರಗೊಂಡಿದೆ.

  ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿಯು ಹನುಮಂತನ ಬಾಲದಂತೆ ದಿನವೂ ಬೆಳೆಯುತ್ತಿದೆ. ತಾಲೂಕಿನಲ್ಲಿ ಇಂದೂರ, ಮೈನಳ್ಳಿ (ಚಿಗಳ್ಳಿ ) ಮತ್ತು ಪಾಳಾ ಎಂಬ ಮೂರು ಜಿಲ್ಲಾ ಪಂಚಾಯತಿ ಕ್ಷೇತ್ರಗಳಿವೆ.

ಇಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಸಾಮಾನ್ಯವಾದರೆ ಮೈನಳ್ಳಿ (ಚಿಗಳ್ಳಿ ) ಮತ್ತು ಪಾಳಾ ಕ್ಷೇತ್ರ ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿದೆ.

  ಇಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಕಳೆದ ಬಾರಿಯೂ ಸಾಮಾನ್ಯವಾಗಿತ್ತು. ಈ ಬಾರಿಯೂ ಸಾಮಾನ್ಯ ಕ್ಷೇತ್ರವಾಗಿದೆ. ಕಳೆದ ಬಾರಿ ಇಂದೂರು ಜಿಲ್ಲಾಪಂಚಾಯತ್ ಕ್ಷೇತ್ರದಲ್ಲಿ ರವಿಗೌಡ ಪಾಟೀಲ್ ಅವರು ಜಯಭೇರಿ ಬಾರಿಸಿದ್ದರು. ಅವರು ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಜನಮನ್ನಣೆಗಳಿಸಿದ್ದಾರೆ.

  ಆದ್ದರಿಂದ ಹಲವಾರು ಮತದಾರರು, ಅಭಿಮಾನಿಗಳು, ಬಿಜೆಪಿ ಪಕ್ಷದ ಕಾರ್ಯಕರ್ತರು, ಮುಖಂಡರು ರವಿಗೌಡ ಪಾಟೀಲ ಅವರಿಗೆ ಇಂದೂರ ಜಿ.ಪಂ. ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.

  ರವಿಗೌಡ ಪಾಟೀಲ್ ಅವರಿಗೆ ಇಂದೂರ ಜಿ.ಪಂ. ಕ್ಷೇತ್ರದಲ್ಲಿ ಬಿ.ಜೆ.ಪಿ. ಟಿಕೆಟ್ ನೀಡಬೇಕು. ಅವರ ಆಯ್ಕೆ ಸುಲಭವಾಗಲಿದೆ. ಜನಬೆಂಬಲ ಕೂಡಾ ಅವರಿಗಿದೆ ಎಂದು ಹಲವಾರು ಬಿ.ಜೆ.ಪಿ. ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರನ್ನು, ಬಿ.ಜೆ.ಪಿ. ವರಿಷ್ಟರನ್ನು ಒತ್ತಾಯಿಸಿದ್ದಾರೆ.