ಮುಂಡಗೋಡ : ಕಾಯಕಯೋಗಿ ಶಿವಶರಣ ಶ್ರೀ ನೂಲಿಯ ಚಂದಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮ

Spread the love

ಮುಂಡಗೋಡ : ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಹಾಗೂ ಪಟ್ಟಣ ಪಂಚಾಯತ ಮುಂಡಗೋಡ ಇವರ ಆಶ್ರಯದಲ್ಲಿ ಕಾಯಕಯೋಗಿ ಶಿವಶರಣ ಶ್ರೀ ನೂಲಿಯ ಚಂದಯ್ಯನವರ 917ನೇ ಜಯಂತ್ಯುತ್ಸವವನ್ನು ಇಂದು ಪಟ್ಟಣ ಪಂಚಾಯತ ಟೌನಹಾಲನಲ್ಲಿ ಆಚರಿಸಲಾಯಿತು. 

ಈ ಕಾರ್ಯಕ್ರಮವನ್ನು ಮಾಜಿ ಶಾಸಕ ವಿ.ಎಸ್.ಪಾಟೀಲ ಉದ್ಘಾಟಿಸಿದರು.
ಧಾರವಾಡದ ಕರ್ನಾಟಕ ಕಾಲೇಜ ಪ್ರಾಧ್ಯಾಪಕರಾದ ಡಾ.ಬಿ.ಎಸ್.ಭಜಂತ್ರಿ ವಿಶೇಷ ಉಪನ್ಯಾಸ ನೀಡಿದರು. ಎ.ಕೆ.ಎಂ.ಎಸ್. ರಾಜ್ಯಾಧ್ಯಕ್ಷರಾದ ಶಿವಾನಂದ ಭಜಂತ್ರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ತಹಶೀಲದಾರ ಶಂಕರ ಗೌಡಿ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯ ಎಲ್.ಟಿ.ಪಾಟೀಲ, ಪ.ಪಂ. ಮುಖ್ಯಾಧಿಕಾರಿ ಚಂದ್ರಶೇಖರ ಬಿ., ಮುಂಖಂಡರಾದ ಹನುಮಂತ ಭಜಂತ್ರಿ, ರಮೇಶ ಭಜಂತ್ರಿ, ಹನ್ಮಂತ ಆರೆಗೊಪ್ಪ, ಹನ್ಮಂತಪ್ಪ ಕೊರವರ, ನಾಗಪ್ಪ ಕೊರವರ, ಪರಶುರಾಮ ಕೊರವರ, ರಾಜು ಕೊರವರ, ಶಿವಪ್ಪ ಕೊರವರ ಮುಂತಾದವರಿದ್ದರು.
ಮಲ್ಲಿಕಾರ್ಜುನ ಭಜಂತ್ರಿ ಸ್ವಾಗತಿಸಿದರು. ರವಿ ಭಜಂತ್ರಿ ಕಾರ್ಯಕ್ರಮ ನಿರೂಪಿಸಿದರು. ಸಂಜನಾ ಭಜಂತ್ರಿ ಕೊಳಗಿ ಅವರಿಂದ ಮಂಗಳ ವಾದ್ಯ ನುಡಿಸಿ ಹಾಗೂ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆದಳು.