ಯಶಸ್ವಿಯಾಗಿ ನಡೆದ ಬಾಲಕೃಷ್ಣ ರೂಪಕ ಸ್ಪರ್ಧೆ ಹಾಗೂ ಯಶೋಧಾಮಯ್ಯ ರೂಪಕ ಸ್ಪರ್ಧೆ

Spread the love

ಮುಂಡಗೋಡ : ನವಚೇತನ ಯುವಕ ಮಂಡಳ ಟ್ರಸ್ಟ್ ಆಶ್ರಯದಲ್ಲಿ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ಬಾಲಕೃಷ್ಣ ರೂಪಕ ಸ್ಪರ್ಧೆ ಹಾಗೂ ಯಶೋಧಾಮಯ್ಯ ರೂಪಕ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು. 

ಈ ಕಾರ್ಯಕ್ರಮವನ್ನು ಉದ್ಯಮಿ ಮಹೇಶ ಹೆಗಡೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ನವಚೇತನ ಯುವಕ ಮಂಡಳ ಟ್ರಸ್ಟ್ ಅಧ್ಯಕ್ಷರಾದ ಮಾರುತಿ ಓಂಕಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಎಂ.ಕೆ.ಗಡವಾಲೆ, ಜಗದೀಶ್ ವಾಲಿಶೆಟ್ಟರ್, ಡಾ.ಅಗರ್ವಾಲ್ ಐ ಕೇರ್ ನ ಪ್ರತಾಪ್, ಕಾರ್ಯಕ್ರಮದ ವ್ಯವಸ್ಥಾಪಕರಾದ ಡಾಕಿರಣ ಹುಲಗೂರ ಆಗಮಿಸಿದ್ದರು. ಶ್ರೀಧರ್ ಛಬ್ಬಿ, ಮಂಜುನಾಥ ಕುಲುಮಕರ, ಸತೀಶ ಹರಿಹರ ಉಪಸ್ಥಿತರಿದ್ದರು.
ಆರಂಭದಲ್ಲಿ ಅದಿತಿ ಕಾನಡೆ ಪ್ರಾರ್ಥನೆ ಗೀತೆ ಹಾಡಿದರು. ಜಗದೀಶ ಕಾನಡೆ ಸ್ವಾಗತಿಸಿದರು. ದಿನೇಶ ವೆರ್ಣೇಕರ್ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಕಲಾಲ್ ವಂದಿಸಿದರು.

ಬಾಲಕೃಷ್ಣ ರೂಪಕ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ 22 ಮಕ್ಕಳು ಹಾಗೂ ಹಿರಿಯರು ವಿಭಾಗದಲ್ಲಿ 32 ಮಕ್ಕಳು ಭಾಗವಹಿಸಿದ್ದರು.
ಬಾಲಕೃಷ್ಣ ರೂಪಕ ಸ್ಪರ್ಧೆಯ ಕಿರಿಯರ ವಿಭಾಗದ ವಿಜೇತರು :
ಪ್ರಥಮ -ಆದ್ಯಾ ರಾಘವೇಂದ್ರ ರಾಯ್ಕರ್
ದ್ವಿತೀಯ -ತ್ರಿಷಾ ರಾಜು ಇಂಗಳೆ
ತೃತೀಯ -ಸಾತ್ವಿಕಾ ರಾಜೇಶ ನಿಡಗುಂದಿ
ಬಾಲಕೃಷ್ಣ ರೂಪಕ ಸ್ಪರ್ಧೆಯ ಹಿರಿಯರ ವಿಭಾಗದ ವಿಜೇತರು :
ಪ್ರಥಮ -ಧನ್ವಿ ವೈ.ಭುಜಂಗಿ
ದ್ವಿತೀಯ -ಅಮೂಲ್ಯ ನಾರಾಯಣ ದೈವಜ್ಞ
ತೃತೀಯ -ಅಜಯಸೂರ್ಯ

ಯಶೋಧಾಮಯ್ಯ ರೂಪಕ ಸ್ಪರ್ಧೆ ವಿಜೇತರು :
ಪ್ರಥಮ- ಪೂಜಾ, ತಾಯಿ-ರಿಶಿತಾ ರಾಂಪುರೆ
ದ್ವಿತೀಯ- ವೃಷ್ಟಿ, ತಾಯಿ- ಅರುಣಾ ಪಿ.ಕೆ.
ತೃತೀಯ- ಭುವನ, ತಾಯಿ- ಶ್ವೇತಾ ಮಡಿವಾಳರ
ಈ ಸ್ಪರ್ಧೆಯ ನಿರ್ಣಾಯಕರಾಗಿ ವಿನಾಯಕ ಶೇಟ, ಪಾಂಡುರಂಗ ಟಿಕ್ಕೋಜಿ, ವಿದ್ಯಾ ಸಣ್ಣಕ್ಕಿ, ದಯಾನಂದ ನಾಯ್ಕ, ಶಶಿಕಾಂತ ರಾಠೋಡ್, ಕವಿತಾ ಚವ್ಹಾಣ ಆಗಮಿಸಿದ್ದರು.