ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟ ಮಂಜು ಪಾವಗಡ

Spread the love

ಬೆಂಗಳೂರು : ಇಷ್ಟು ದಿನ ಎಲ್ಲರ ಗಮನ ಸೆಳೆದು ಕುತೂಹಲ ಮೂಡಿಸಿದ್ದ ಕನ್ನಡದ ಬಿಗ್ ಬಾಸ್ ಗೆ ತೆರೆ ಬಿದ್ದಿದೆ. ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಆಗಿ ಮಂಜು ಪಾವಗಡ ಹೊರಹೊಮ್ಮಿದ್ದಾರೆ.

ಕೊನೆಯ ಹಂತದಲ್ಲಿ ದೊಡ್ಮನೆಯಲ್ಲಿ ಉಳಿದಿದ್ದ ಟಾಪ್ 3 ಕಂಟೆಸ್ಟೆಂಟ್ ಗಳಾದ ಮಂಜು, ಅರವಿಂದ್ ಮತ್ತು ದಿವ್ಯಾ ನಡುವೆ ಭಾರೀ ಪೈಪೋಟಿ ನಡೆದಿತ್ತು. ಆದರೆ ಕೊನೆಗೆ ಮಂಜು ಪಾವಗಡ ವಿನ್ನರ್ ಎಂದು ಕಿಚ್ಚ ಸುದೀಪ್ ಘೋಷಿಸಿದರು. ಇದರಿಂದ ಅರವಿಂದ್ ಕೆಪಿ ರನ್ನರ್ ಅಪ್ ಆಗಿದ್ದಾರೆ.

ಬಿಗ್ ಬಾಸ್ ಸೀಸನ್ 8ರ ಫಿನಾಲೆಯಲ್ಲಿ ಅರವಿಂದ್ ಕೆಪಿ, ವೈಷ್ಣವಿ ಗೌಡ, ದಿವ್ಯಾ ಉರುಡುಗ, ಮಂಜು ಪಾವಗಡ ಹಾಗೂ ಪ್ರಶಾಂತ್ ಸಂಬರಗಿ ಇದ್ದರು. ಆದರೆ ಫಿನಾಲೆಗೂ ಮುನ್ನ ವೈಷ್ಣವಿ ಗೌಡ ಮತ್ತು ಪ್ರಶಾಂತ್ ಸಂಬರಗಿ ಹೊರಬಂದಿದ್ದರು.

ಕೊನೆಯದಾಗಿ ಉಳಿದುಕೊಂಡಿದ್ದು ಮಂಜು ಪಾವಗಡ, ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ. ಆದರೆ ಫಿನಾಲೆ ದಿನ ದಿವ್ಯಾ ಉರುಡುಗ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು.