
ಹಾವೇರಿ : ಪತ್ನಿಯೊಬ್ಬಳು ತನ್ನ ಪತಿಯನ್ನೇ ಭೀಕರವಾಗಿ ಕೊಲೆ ಮಾಡಿ ಆಕ್ಸಿಡೆಂಟ್ ಎಂದು ಬಿಂಬಿಸಲು ಯತ್ನಿಸಿದ ಘಟನೆ ಬಂಕಾಪುರದ ಬಳಿ ನಡೆದಿದೆ. ಮೃತ ವ್ಯಕ್ತಿ ಮುಂಡಗೋಡ ತಾಲೂಕಿನ ಮುಡಸಾಲಿ ಗ್ರಾಮದ ಮಂಜುನಾಥ ಜಾಧವ್ ಆಗಿದ್ದಾನೆ. ಆತನನ್ನು ಧಾರವಾಡದಲ್ಲಿ ಕೊಲೆ ಮಾಡಿ ಬಂಕಾಪುರದಲ್ಲಿ ಶವ ಎಸೆದು ಹೋಗಲಾಗಿತ್ತು.

ಮೂರನೇ ಪತ್ನಿಯಿಂದ ಹತ್ಯೆ:
ಮುಂಡಗೋಡ ತಾಲೂಕಿನ ಮುಡಸಾಲಿ ಗ್ರಾಮದ ನಿವಾಸಿಯಾಗಿರುವ ಮಂಜುನಾಥ ಶಿವಪ್ಪ ಜಾದವ್ (45) ಬರ್ಬರವಾಗಿ ಹತ್ಯೆಯಾಗಿರುವ ವ್ಯಕ್ತಿಯಾಗಿದ್ದಾನೆ. ಈತನನ್ನು ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಆತನ ಮೂರನೇ ಪತ್ನಿ ಮಧು ಎಂಬಾಕೆಯೇ ಕೊಲೆಗೈದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾಳೆ. ಆದರೆ ಪೊಲೀಸರ ವಿಚಾರಣೆ ವೇಳೆ ಬ್ಯೂಟಿಪಾರ್ಲರ್ ಆಂಟಿಯ ಪಾತಕ ಕೃತ್ಯ ಬಯಲಾಗಿದೆ.

ಸಿನಿಮಾ ಸ್ಟೈಲ್ನಲ್ಲಿ ಬರ್ಬರ ಹತ್ಯೆ:
ಮಂಜುನಾಥ ಶಿವಪ್ಪ ಜಾಧವ್ ಅವರನ್ನು ಸಿನಿಮಾ ಸ್ಟೈಲ್ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಧಾರವಾಡದಲ್ಲಿ ಪತಿಯನ್ನು ಹತ್ಯೆಗೈದು ಬಂಕಾಪುರದಲ್ಲಿ ಹೆಣ ಬಿಸಾಕಿ ಎಸ್ಕೆಪ್ ಆಗಿದ್ದರು. ಮಧು ಮತ್ತು ಆಕೆಯ ಮಕ್ಕಳಾದ ವಿನಯ್, ವಿಕಾಸ್ ಆರೋಪಿಗಳಾಗಿದ್ದಾರೆ. 14 ವರ್ಷದ ಹಿಂದೆ ಮಧು ಜೊತೆ ಮಂಜುನಾಥ ಶಿವಪ್ಪ ಜಾಧವ್ ಅನೈತಿಕ ಸಂಬಂಧ ಹೊಂದಿದ್ದನು.

ಸಿಸಿಟಿ ಹಾಕಿಸಿದ್ದ ವಿಚಾರಕ್ಕೆ ಗಲಾಟೆ:
ಬಳಿಕ ಅನೈತಿಕ ಸಂಬಂಧ ಮದುವೆಯಾಗಿ ಕನ್ಸರ್ಟ್ ಆಗಿತ್ತು, ಆದಾದ ಬಳಿಕ ಮಧುಗೆ ಶಿವಪ್ಪ ಬ್ಯೂಟಿಪಾರ್ಲರ್ ಹಾಕಿಕೊಟ್ಟಿದ್ದ. ಅಷ್ಟೇ ಅಲ್ಲದೆ ಅಡಿಕೆ ತೋಟ ಮಾರಾಟ ಮಾಡಿ ಆಕೆಯನ್ನ ಸಾಕಿದ್ದನು. ಸುಮಾರು 2 ಕೋಟಿ ರೂಪಾಯಿ ಅಡಿಕೆ ತೋಟವನ್ನು ಮಂಜುನಾಥ ಶಿವಪ್ಪ ಜಾದವ್ ಮಧುಗಾಗಿ ಮಾರಾಟ ಮಾಡಿದ್ದ ಎಂದು ಆರೋಪಿಸಲಾಗಿದೆ. ಇಷ್ಟೆಲ್ಲಾ ಇದ್ದರೂ ಕೂಡ ಮಧು ಬೇರೊಬ್ಬ ವ್ಯಕ್ತಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಶಂಕೆ ವ್ಯಕ್ತಿಪಡಿಸಿದ ಮಂಜುನಾಥ, ಆಕೆ ವಾಸ ಮಾಡ್ತಾ ಇದ್ದ ಮನೆಗೆ ಸಿಸಿಟಿವಿ ಹಾಕಿಸಿದ್ದ.

ಕೊಂದು ಬೇರೆಡೆಗೆ ಶವ ಹಸ್ತಾಂತರಿಸಿದ ಪತ್ನಿ:
ಸಿಸಿಟಿವಿಯಲ್ಲಿ ಕ್ಯಾಮರಾ ಅಳವಡಿಸಿದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆಗಿದೆ.
ಮಂಜುನಾಥ ಕೊನೆಯದಾಗಿ ಶನಿವಾರದಂದು 3ನೇ ಹೆಂಡ್ತಿ ಮಧು ಮನೆಗೆ ತೆರಳಿದ್ದ. ಈ ವೇಳೆ ಮನೆಯಲ್ಲಿ ಮಂಜುನಾಥ ಶಿವಪ್ಪ ಜಾದವ್ನನ್ನು ಬರ್ಬರವಾಗಿ ಕೊಲೆಗೈದು ಕಾರಿನಲ್ಲಿ ಹೆಣ ಸಾಗಿಸಿ ಬಂಕಾಪೂರ ಹೊರವಲಯದಲ್ಲಿ ಶವ ಬಿಸಾಕಿ ಆರೋಪಿಗಳು ತೆರಳಿದ್ದಾರೆ.
ಇತ್ತ, ಕೊಲೆ ಪ್ರಕರಣವನ್ನು ಆರೋಪಿಗಳು ಅಪಘಾತವೆಂದು ಬಿಂಬಿಸಲು ಹೊರಟಿದ್ದರು.
ಬಳಿಕ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಕೊಲೆ ಮಾಡಿರುವ ಕುರಿತು ಆರೋಪಿ ಮಧು ಸತ್ಯ ಒಪ್ಪಿಕೊಂಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
