ಶಾಸಕ ಯತ್ನಾಳ ಸಿಡಿ ಬಿಡುಗಡೆಯ ಬೆದರಿಕೆ ಪೋಸ್ಟ್ : ಪ್ರಕರಣ ದಾಖಲು

Spread the love

ವಿಜಯಪುರ : ವಿಜಯಪುರ ನಗರ ಶಾಸಕ‌ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಇನ್ ಸ್ಟಾಗ್ರಾಂ ನಲ್ಲಿ ಅಶ್ಲೀಲ ಪೋಸ್ಟ್ ಹಾಕಿದ ಕುರಿತು ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

“ಬಿಜೆಪಿ ಹಿಂದೂ ಹುಲಿಯ ಸಿಡಿ ಬಿಡುಗಡೆಗೆ ಕ್ಷಣಗಣನೆ, ಭರ್ಜರಿ ಯಶಸ್ಸು ಕಾಣಲಿ ಎಂದು ಆಶಿಸುತ್ತೇವೆ” ಎಂಬ ಬರಹ ಹಾಗೂ ಶಾಸಕ ಯತ್ನಾಳ ಅವರ ಫೋಟೋ ಹಾಕಲಾಗಿದೆ.

“ನಮ್ಮಕಾಂಗ್ರೆಸ್” ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ಬಗ್ಗೆ ಸಿಇಎನ್ ಅಪರಾಧ ವಿಭಾಗ ಠಾಣೆಯಲ್ಲಿ ದೂರು ದಾಖಲಾಗಿದೆ.

ವೂಡಾ ಸದಸ್ಯ, ಶಾಸಕ ಯತ್ನಾಳ ಬೆಂಬಲಿಗ ಲಕ್ಷ್ಮಣ ಜಾಧವ ಈ ಬಗ್ಗೆ ಸೂಕ್ತ ದಾಖಲೆಗಳ ಸಮೇತ ನೀಡಿರುವಂತೆ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿ ಕೊಂಡಿದ್ದರೂ ಸಿಇಎನ್ ಅಪರಾಧ ವಿಭಾಗದ ಪೊಲೀಸರು ಯಾರನ್ನೂ ಬಂಧಿಸಿಲ್ಲ.