Raj Newsline

ಹೆಬ್ಬಾರ ರೇಶನ್ ಕಿಟ್ ವಿತರಣೆಗೆ ಸಿದ್ದತೆ

ಮುಂಡಗೋಡ: ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಬಡ ಕುಟುಂಬಗಳಿಗೆ ಹೆಬ್ಬಾರ ರೇಷನ್ ಕಿಟ್ ವಿತರಣೆ ಮಾಡಲು ಸಕಲ ಸಿದ್ಧತೆ ನಡೆಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಬಡ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದು ಇದರಿಂದ ಕ್ಷೇತ್ರದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಸಚಿವ ಶಿವರಾಮ ಹೆಬ್ಬಾರ ಅವರು ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ 63ಸಾವಿರ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಹೆಬ್ಬಾರ ರೇಷನ್ ಕೀಟ್‍ನ್ನು ಸಚಿವ ಹೆಬ್ಬಾರ ಅವರ ಕುಟುಂಬದ ವತಿಯಿಂದ ಜನರಿಗೆ ಸದ್ಯದಲ್ಲಿಯೆ ವಿತರಿಸಲಾಗುವುದು. ಪಡಿತರ ಚೀಟಿ…

Read More

ಬಾಡಿಗೆದಾರರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಮುಂಡಗೋಡ: ಪಟ್ಟಣ ಪಂಚಾಯತ ವಾಣಿಜ್ಯ ಮಳಿಗೆಗಳ ಮೂರು ತಿಂಗಳ ಬಾಡಿಗೆ ಹಣವನ್ನು ವಿನಾಯತಿ ನೀಡುವಂತೆ ವಾಣಿಜ್ಯ ಮಳಿಗೆ ಬಾಡಿಗೆದಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ನಾವುಗಳು ಪಟ್ಟಣ ಪಂಚಾಯತಕ್ಕೆ ಸೇರಿದ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಪಡೆದುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಆದರೆ ಕೋವಿಡ್ ಎರಡನೆ ಅಲೆ ಆರಂಭವಾದ ನಂತರ ನಾವು ನಮ್ಮ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿಕೊಂಡು ಮನೆಯಲ್ಲಿ ಉಳಿದುಕೊಂಡಿದ್ದೆವು. ಇದೀಗ ಲಾಕ್‍ಡೌನ್ ತೆರವುಗೊಳಿಸಿದ ಪರಿಣಾಮ ನಮ್ಮ ಅಂಗಡಿಗಳನ್ನು ಆರಂಭಿಸಿದ್ದೇವೆ. ಆದರೆ ಸರಿಯಾದ ವ್ಯಾಪಾರ ನಡೆಯುತ್ತಿಲ್ಲ. ಆದ್ದರಿಂದ ವಾಣಿಜ್ಯ…

Read More

ಸಚಿವ ಶಿವರಾಮ ಹೆಬ್ಬಾರ ಅವರಿಂದ ರಾಜ ನ್ಯೂಸ್ ಲೈನ್ ಡಿಜಿಟಲ್ ಮಿಡಿಯಾಕ್ಕೆ ಚಾಲನೆ

ಮುಂಡಗೋಡ : ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ ಅವರು ಇಂದು ರಾಜ ನ್ಯೂಸ್ ಲೈನ್ ಡಿಜಿಟಲ್ ಮಿಡಿಯಾಕ್ಕೆ ಚಾಲನೆ ನೀಡಿದರು.     ಈ ಸಂದರ್ಭದಲ್ಲಿ ರಾಜ ನ್ಯೂಸ್ ಲೈನ್ ಮಾಲೀಕರೂ, ಸಂಪಾದಕರಾದ ರಾಜಶೇಖರ ನಾಯ್ಕ, ತಹಶೀಲದಾರ ಶ್ರೀಧರ ಮುಂದಲಮನಿ, ಜಿಲ್ಲಾ ಪಂಚಾಯತ ಸದಸ್ಯರಾದ ಎಲ್.ಟಿ.ಪಾಟೀಲ ಮತ್ತು ರವಿಗೌಡ ಪಾಟೀಲ, ಬಿ.ಜೆ.ಪಿ. ಅಧ್ಯಕ್ಷರಾದ ನಾಗಭೂಷಣ ಹಾವಣಗಿ ಮುಂತಾದವರಿದ್ದರು.

Read More

ಗೋವಿನಜೋಳಕ್ಕೆ ಸೈನಿಕ ಹುಳುವಿನ ಬಾಧೆ

ಮುಂಡಗೋಡ : ತಾಲೂಕಿನ ಗ್ರಾಮೀಣ ಭಾಗದಲ್ಲಿನ ಗೋವಿನಜೋಳ ಬೆಳೆಗೆ ಸೈನೀಕ ಹುಳು ಭಾದೆ ಕಂಡು ಬಂದಿದ್ದು ರೈತರು ಸೂಕ್ತ ಔಷಧೋಪಚಾರ ಮಾಡುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ಎಂ.ಎಸ್.ಕುಲಕರ್ಣಿ ತಿಳಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ತಾಲೂಕಿನ ಸಾವಿರಾರು ರೈತರು ಗೋವಿನಜೋಳ ಬೆಳೆ ಬೆಳೆದಿದ್ದು ಇದೀಗ ಕೆಲವು ಗ್ರಾಮಗಳಲ್ಲಿ ಗೋವಿನಜೋಳ ಬೆಳೆಗೆ ಸೈನೀಕ ಹುಳು ಭಾದೆ ಕಾಣಿಸಿಕೊಂಡಿದೆ. ಈ ಸೈನಿಕ ಹುಳು ಗಿಡದ ಏಲೆಗಳನ್ನು ತಿನ್ನುವ ಮೂಲಕ ಗಿಡದ ಕಾಂಡವನ್ನು ಸಹ ತಿಂದು ಹಾಕುತ್ತದೆ. ಆದ್ದರಿಂದ ಸೈನಿಕ ಹುಳು ಭಾದೆ…

Read More

ಎ.ಎಸ್.ಐ. ಸೇರಿದಂತೆ 7 ಪೊಲೀಸರಿಗೆ ವರ್ಗಾವಣೆ

ಮುಂಡಗೋಡ : ಎ.ಎಸ್.ಐ. ಸೇರಿದಂತೆ ಒಟ್ಟು 7 ಜನ ಪೊಲೀಸರಿಗೆ ಮುಂಡಗೊಡ ಪೊಲೀಸಠಾಣೆಯಿಂದ ವರ್ಗಾವಣೆಯಾಗಿದೆ. ಎ.ಎಸ್.ಐ. ಅಶೋಕ ರಾಠೋಡ, ಖೀರು ಘಟಕಾಂಬಳೆ, ರಾಘು ನಾಯ್ಕ, ಭಗವಾನ ಗಾಂವಕರ, ಕುಮಾರ ಬಣಕಾರ, ಗುರು ನಾಯಕ ಮತ್ತು ಮಹಿಳಾ ಪೊಲೀಸ ಪೂಜಾ ವರ್ಗಾವಣೆಗೊಂಡಿದ್ದಾರೆ. ವರ್ಗಾವಣೆಗೊಂಡ ಪೊಲೀಸರಿಗೆ ಬೀಳ್ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿ.ಪಿ.ಐ. ಪ್ರಭುಗೌಡ, ಪಿ.ಎಸ್.ಐ. ಬಸವರಾಜ ಮಬನೂರ ಮತ್ತು ಎನ್.ಡಿ.ಜಕ್ಕಣ್ಣವರ್ ಇತರರು ಇದ್ದರು.

Read More

ದೇಶಪಾಂಡೆ ರುಡಸೆಟಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೆಡಿಕಲ್ ಸೆಫ್ಟಿ ಕಿಟ್ ವಿತರಣೆ

ಮುಂಡಗೋಡ : ದೇಶಪಾಂಡೆ ರುಡಸೆಟಿ ಮುಂಡಗೋಡರವರು ಇಂದು ತಾಲೂಕಿನ ಇಂದೂರ, ನಂದಿಕಟ್ಟಾ ಮತ್ತು ಹುನಗುಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೆಡಿಕಲ್ ಸೆಫ್ಟಿ ಕಿಟ್ ವಿತರಿಸಿದರು.     ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ ಕಾಂಗ್ರೆಸ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ, ಸದಸ್ಯರು ಹಾಗೂ ದೇಶಪಾಂಡೆ ರುಡಸೆಟಿ ಸಿಬ್ಬಂದಿಗಳು ಇದ್ದರು.

Read More