ಹೆಬ್ಬಾರ ರೇಶನ್ ಕಿಟ್ ವಿತರಣೆಗೆ ಸಿದ್ದತೆ

Spread the love

ಮುಂಡಗೋಡ: ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಬಡ ಕುಟುಂಬಗಳಿಗೆ ಹೆಬ್ಬಾರ ರೇಷನ್ ಕಿಟ್ ವಿತರಣೆ ಮಾಡಲು ಸಕಲ ಸಿದ್ಧತೆ ನಡೆಸಲಾಗಿದೆ.

ಕೋವಿಡ್ ಸಂದರ್ಭದಲ್ಲಿ ಬಡ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದು ಇದರಿಂದ ಕ್ಷೇತ್ರದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಸಚಿವ ಶಿವರಾಮ ಹೆಬ್ಬಾರ ಅವರು ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ 63ಸಾವಿರ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಹೆಬ್ಬಾರ ರೇಷನ್ ಕೀಟ್‍ನ್ನು ಸಚಿವ ಹೆಬ್ಬಾರ ಅವರ ಕುಟುಂಬದ ವತಿಯಿಂದ ಜನರಿಗೆ ಸದ್ಯದಲ್ಲಿಯೆ ವಿತರಿಸಲಾಗುವುದು. ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಎರಡು ದಿನಗಳಲ್ಲಿ  ಟೋಕನ್ ನೀಡಲಾಗುವುದು. ನಂತರ ಟೋಕನ್ ಹೊಂದಿದ ಫಲಾನುಭವಿಗಳಿಗೆ ರೇಷನ್ ಕೀಟ್ ವಿತರಿಸಲು ಸಕಲ ಸಿದ್ದತೆ ನಡೆಸಲಾಗಿದೆ. ಈ ಕಾರ್ಯದಲ್ಲಿ ಪಕ್ಷದ ಮುಖಂಡರು, ಜನಪ್ರತಿನಿಧಿಗಳು, ಅಭಿಮಾನಿಗಳು  ಭಾಗವಹಿಸಿ  ಈ ಕೆಲಸ ಯಶಸ್ವಿಗೊಳಿಸುವಂತೆ ಸಚಿವ ಹೆಬ್ಬಾರ ಸಾಮಾಜಿಕ ಜಾಲತಾಣಗಳ ಮೂಲಕ ಕ್ಷೇತ್ರದ ಜನತೆಗೆ ತಿಳಿಸಿದ್ದಾರೆ.