ಗುರು ಗೌರವಾರ್ಪಣೆ ಮತ್ತು ಅಭಿನಂದನಾ ಕಾರ್ಯಕ್ರಮ
ಮುಂಡಗೋಡ : ತಾಲೂಕಿನ ಕರಗಿನಕೊಪ್ಪದ ವಿಕಾಸ ನಗರದಲ್ಲಿ ಸೆಪ್ಟಂಬರ್ 5ರಂದು ಶಿಕ್ಷಕರ ದಿನಾಚರಣೆಯ ನಿಮಿತ್ತ ಗುರು ಗೌರವಾರ್ಪಣಾ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಿತು. ವಿಕಾಸ ನಗರದಲ್ಲಿ ಎಲ್ಲಾ ಸದಸ್ಯರು ಇಲ್ಲಿಯ ನಿವಾಸಿಗಳು ಆತ್ಮೀಯವಾಗಿ 22 ಶಿಕ್ಷಕ, ಶಿಕ್ಷಕಿಯರಿಗೆ ಗುರು ಗೌರವಾರ್ಪಣೆ ಸಲ್ಲಿಸಿದರು. ಅದೇ ರೀತಿ ಇಲ್ಲಿಯ ನಿವಾಸಿಗಳಾದ ಅಣ್ಣಪ್ಪ ಖಂಡಪ್ಪನವರ್, ಶಂಕರ ಮಡಿವಾಳ, ಲಕ್ಷ್ಮಿ ಗಾಣಿಗೇರ ಇವರ ವೃತ್ತಿಯ ವಿಶೇಷ ಸಾಧನೆಗಾಗಿ ನಿವಾಸಿಗಳಿಂದ ಅಭಿನಂದನೆ ಸಲ್ಲಿಸಲಾಯಿತು. ವಿಕಾಸನಗರದ ಮಕ್ಕಳು NEET, CET ಹಾಗೂ PUC ವಿಜ್ಞಾನ ವಿಭಾಗದಲ್ಲಿ…