Headlines

ಗುರು ಗೌರವಾರ್ಪಣೆ ಮತ್ತು ಅಭಿನಂದನಾ ಕಾರ್ಯಕ್ರಮ

Spread the love

ಮುಂಡಗೋಡ : ತಾಲೂಕಿನ ಕರಗಿನಕೊಪ್ಪದ ವಿಕಾಸ ನಗರದಲ್ಲಿ ಸೆಪ್ಟಂಬರ್ 5ರಂದು ಶಿಕ್ಷಕರ ದಿನಾಚರಣೆಯ ನಿಮಿತ್ತ ಗುರು ಗೌರವಾರ್ಪಣಾ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಿತು. 

ವಿಕಾಸ ನಗರದಲ್ಲಿ ಎಲ್ಲಾ ಸದಸ್ಯರು ಇಲ್ಲಿಯ ನಿವಾಸಿಗಳು ಆತ್ಮೀಯವಾಗಿ 22 ಶಿಕ್ಷಕ, ಶಿಕ್ಷಕಿಯರಿಗೆ ಗುರು ಗೌರವಾರ್ಪಣೆ ಸಲ್ಲಿಸಿದರು. ಅದೇ ರೀತಿ ಇಲ್ಲಿಯ ನಿವಾಸಿಗಳಾದ ಅಣ್ಣಪ್ಪ ಖಂಡಪ್ಪನವರ್, ಶಂಕರ ಮಡಿವಾಳ, ಲಕ್ಷ್ಮಿ ಗಾಣಿಗೇರ ಇವರ ವೃತ್ತಿಯ ವಿಶೇಷ ಸಾಧನೆಗಾಗಿ ನಿವಾಸಿಗಳಿಂದ ಅಭಿನಂದನೆ ಸಲ್ಲಿಸಲಾಯಿತು. 

ವಿಕಾಸನಗರದ ಮಕ್ಕಳು  NEET, CET ಹಾಗೂ PUC ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಸಾಧನೆ ಮಾಡಿದ ಮಕ್ಕಳಿಗೆ ಅಭಿನಂದಿಸಿ ಪ್ರೋತ್ಸಾಹಿಸಲಾಯಿತು. ಹರ್ಷಿತಾ ಮಡಿವಾಳ (MBBS), ಭೂಮಿಕಾ ಪಟಗಾರ (BE), ದೀಪಿಕಾ ಪಟಗಾರ (BAMS), ನಿವೇದಿತಾ ಮೇಲ್ಮುರಿ (PUCಯಲ್ಲಿ ಹೆಚ್ಚು ಅಂಕ), ರಕ್ಷಿತಾ ಗಂಗೋಜಿ (BCA) ಸಾಧನೆಗೆ ಅಭಿನಂದಿಸಲಾಯಿತು.

ಕಾರ್ಯಕ್ರಮದ ಸಂಘಟಕರಾದ ರೋಟರಿ ಕ್ಲಬ್ ಅಧ್ಯಕ್ಷರಾದ ಸುರೇಶ ಮಂಜಾಳ್ಕರ್,  ನಿವೃತ್ತ ಶಿಕ್ಷಕ ಡಿ.ಎಸ್.ಪಟಗಾರ, ನಿವೃತ್ತ ಸೈನಿಕ ಪರಶುರಾಮ ಕಲಗೋಡಿ ಇವರೆಲ್ಲರ ಸಂಘಟನೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.