ಮೈಸೂರು: ಗ್ಯಾರಂಟಿ ಯೋಜನೆಗಳನ್ನು ಜುಲೈ ಒಂದರಿಂದ ಕಲಬುರ್ಗಿ ಯಲ್ಲಿ ಗೃಹಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಜುಲೈ ಒಂದರಿಂದ 10 ಕೆಜಿ ಆಹಾರಧಾನ್ಯ ಕೊಡುವುದು ಕೂಡ ಚಾಲನೆಯಾಗುತ್ತಿದೆ. ಅದನ್ನು ಬಹುತೇಕ ಮೈಸೂರು ಜಿಲ್ಲೆಯಲ್ಲಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಈ ಮೂಲಕ ಬಿಪಿಎಲ್, ಎಪಿಲ್ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಅವರು ಮೈಸೂರಿನ ಹೆಲಿಪ್ಯಾಡ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಭಾನುವಾರ 1.00 ಗಂಟೆಯಿಂದ ಶಕ್ತಿ ಯೋಜನೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಜಾರಿಗೆ ಬರಲಿದೆ ಎಂದರು.