ಮುಂಡಗೋಡನಲ್ಲಿ ಶಕ್ತಿ ಯೋಜನೆಗೆ ಚಾಲನೆ… ಮಹಿಳಾ ಪ್ರಯಾಣಿಕರಿಗೆ ಗುಲಾಬಿ ಹೂ…

Spread the love

ಮುಂಡಗೋಡ : ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೆಯದಾದ ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಗೆ ಇಂದು ಮುಂಡಗೋಡ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ ಮುಖಂಡರು, ಮಹಿಳಾ ಮುಖಂಡರು, ಕಾರ್ಯಕರ್ತರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ ಕಾಂಗ್ರೆಸ ಅಧ್ಯಕ್ಷರಾದ ಜ್ಞಾನೇಶ್ವರ ಗುಡಿಯಾಳ, ಕಾಂಗ್ರೆಸ ಮುಖಂಡರಾದ ಎಂ.ಎನ್.ದುಂಡಶಿ, ಮಹ್ಮದಗೌಸ ಮಕಾನದಾರ, ಮಹ್ಮದಗೌಸ ಅತ್ತಾರ, ರಾಮಣ್ಣ ಕುನ್ನೂರ, ಬಸವರಾಜ ನಡುವಿನಮನಿ, ಗೋಪಾಲ ಪಾಟೀಲ, ಕೆ.ಸಿ.ಥಾಮಸ್, ಮಂಜುನಾಥ ಪಾಟೀಲ, ರಜಾ ಪಠಾಣ, ರಾಮಕೃಷ್ಣ ಮೂಲಿಮನಿ, ಅಲ್ಲಿಖಾನ ಪಠಾಣ, ರಫೀಕ ಇನಾಂದಾರ, ರಾಜಶೇಖರ ಹಿರೇಮಠ, ಜೈನು ಬೆಂಡಿಗೇರಿ, ಇರ್ಫಾನ ಸವಣೂರ, ಅಲ್ಲಾವುದ್ದೀನ್ ಕಮಡೊಳ್ಳಿ, ನಾಗರಾಜ ಹಂಚಿನಮನಿ, ರವಿ ಪಾಟೀಲ, ಸಲೀಂ ನಂದಿಗಟ್ಟಿ, ವಾದಿರಾಜ, ಬಸವರಾಜ ಗಾಣಿಗೇರ, ಲಾಡನವರ್, ಪ.ಪಂ.ಸದಸ್ಯರು, ಕಾರ್ಯಕರ್ತರುಮುಂತಾದವರಿದ್ದರು. 

ಮಹಿಳಾ ಪ್ರಯಾಣಿಕರಿಗೆ ಗುಲಾಬಿ ಹೂ…..

ಮಹಿಳಾ ಪ್ರಯಾಣಿಕರಿಗೆ ಬ್ಲಾಕ ಕಾಂಗ್ರೆಸ ಅಧ್ಯಕ್ಷರಾದ ಜ್ಙಾನೇಶ್ವರ ಗುಡಿಯಾಳ, ಪ.ಪಂ. ಸದಸ್ಯರಾದ ಮಹ್ಮದಗೌಸ ಮಕಾನದಾರ, ಅವರು ಗುಲಾಬಿ ಹೂ ನೀಡಿ ಶುಭ ಕೋರಿದರು.