ಬೆಂಗಳೂರು: ಕುಟುಂಬ ರಾಜಕಾರಣದಿಂದ ಬೇಸತ್ತಿರುವ ಕೆಲವು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಮೈಸೂರು ಭಾಗದ ಶಾಸಕರೊಬ್ಬರು ತಮ್ಮನ್ನು ಪಾರ್ಟಿಯಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಇಲ್ಲದೇ ಮುಂದೆ ರಾಜ್ಯದಲ್ಲಿ ಜೆಡಿಎಸ್ನವರು ಅಧಿಕಾರಕ್ಕೆ ಬರೋದು ಅನುಮಾನವಾಗಿದ್ದು, ಈ ನಿಟ್ಟಿನಲ್ಲಿ ತಮ್ಮ ರಾಜಕೀಯ ಜೀವನವನ್ನು ಸರಿ ಮಾಡಿಕೊಳ್ಳುವ ಸಲುವಾಗಿ ಅವರು ಕಾಂಗ್ರೆಸ್ ಬಾಗಿಲು ತಟ್ಟುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇದಲ್ಲದೇ ತಮ್ಮೊಂದಿಗೆ ಜೆಡಿಎಸ್ನ ಸರಿ ಸುಮಾರು ಒಟ್ಟು 12 ಮಂದಿ ಶಾಸಕರನ್ನು ಕೂಡ ಕರೆ ತರುವುದಕ್ಕೆ ಅವರು ಮುಂದಾಗಿದ್ದು, ಯಾವುದೇ ರೀತಿಯಲ್ಲಿ ಕಾನೂನು ತೊಡಕು ಆಗದಂತೆ ಅವರು ಮುಂದಾಗಿದ್ದಾರೆ ಎನ್ನಲಾಗಿದೆ.