ವರ್ತೂರು ಸಂತೋಷ್ ಯಾರು? ಏನಿದು ಪ್ರಕರಣ?

Spread the love

ಬಿಗ್ ಬಾಸ್ ಮನೆಯಲ್ಲಿರೋ ವರ್ತೂರ ಸಂತೋಷ್ ಶ್ರೀಮಂತ ರೈತನೇ ಬಿಡಿ. ಅದೆಷ್ಟು ಶ್ರೀಮಂತ ಅಂದ್ರೆ ಮೈತುಂಬಾ ಬಂಗಾರವನ್ನ ಹಾಕಿಕೊಳ್ಳುವಷ್ಟು ಶ್ರೀಮಂತ ಅಂದ್ರೂ ತಪ್ಪಿಲ್ಲ. ಬಿಗ್ ಬಾಸ್‌ನಲ್ಲಿ ಈ ರೈತನ ಶ್ರೀಮಂತಿಕೆಯನ್ನ ಎಲ್ಲರೂ ನೋಡಿದ್ದಾರೆ.

ವರ್ತೂರು ಸಂತೋಷ್ ಯಾರು?

ಏನ್ ಈ ಸಂತೋಷ್ ಹಿನ್ನೆಲೆ? ಈ ಎಲ್ಲ ಪ್ರಶ್ನೆಗೆ ಉತ್ತರ ಇಂಟ್ರಸ್ಟಿಂಗ್ ಆಗಿಯೇ ಇದೆ. ವರ್ತೂರು ಸಂತೋಷ್ ಹಲವು ಪ್ರಾಣಿಗಳನ್ನ ಸಾಕಿದ್ದಾರೆ. ಅವುಗಳಲ್ಲಿ ಹಳ್ಳಿಕಾರ ತಳಿಯ ಹಸುಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದ್ದಾರೆ. ನಶಿಸಿ ಹೋಗ್ತಿರೋ ಈ ತಳಿಯನ್ನ ಸಂರಕ್ಷಿಸೋ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಸಮಿತಿಯೊಂದನ್ನ ಮಾಡಿ ಅದರ ಅಧ್ಯಕ್ಷರು ಆಗಿದ್ದಾರೆ.

ವರ್ತೂರು ಸಂತೋಷ್ ಮೂಲ ಹೆಸರು ವರ್ತೂರು ಸಂತೋಷ್ ಅಭಿಮಾನಿ ಅಂತಲೇ ಇದೆ. ಸಂತೋಷ್ ಅನ್ನುವ ನಿಕ್ ನೇಮ್ ನಿಂದಲೇ ಕರೆಯುತ್ತಾರೆ. ಗ್ರಾಜ್ಯುವೇಶನ್ ಕೂಡ ಮಾಡಿದ್ದಾರೆ. ಆದರೆ, ರೈತನಾಗಿಯೇ ಎಲ್ಲವನ್ನೂ ಸಾಧಿಸಬಹುದು. ಶ್ರೀಮಂತನಾಗಿಯೇ ಇರಬಹುದು ಅನ್ನೋದನ್ನ ವರ್ತೂರು ಸಂತೋಷ್ ತೋರಿಸಿಕೊಟ್ಟಿದ್ದಾರೆ.

ವರ್ತೂರ್ ಸಂತೋಷ್ ಮೈ ಮೇಲಿನ ಆಭರಣ ನೋಡಿದ್ರೆ ಎಲ್ಲರಿಗೂ ಶಾಕ್ ಆಗುತ್ತದೆ. ಒಬ್ಬ ರೈತ ಈ ಹಂತಕ್ಕೆ ಇರಬಹುದೇ? ಅನ್ನುವ ಕುತೂಹಲ ಮೂಡುತ್ತದೆ. ಹಾಗಾಗಿಯೇ ವರ್ತೂರು ಸಂತೋಷ್, ಒಬ್ಬ ರೈತ ಮನಸ್ಸು ಮಾಡಿದ್ರೆ ಹೀಗೂ ಇರಬಹುದು ಅಂತಲೇ ಹೇಳುತ್ತಾರೆ.

ಬಿಗ್ ಬಾಸ್ ಮನೆಗೆ ಬಂದಾಗ ಮೊದಲ ದಿನವೇ ವರ್ತೂರು ಸಂತೋಷ್ ತಮ್ಮ ಈ ಒಂದು ಶ್ರೀಮಂತ ಲುಕ್‌ ನಿಂದ ಗಮನ ಸೆಳೆದಿದ್ದಾರೆ. ಮೊದಲ ದಿನವೇ ವರ್ತೂರು ಸಂತೋಷ್ ಆಭರಣಗಳನ್ನ ಕಂಡು ಅನೇಕರು ಹುಬ್ಬೇರಿಸಿದ್ದು ಇದೆ. ಏನಪ್ಪ ಇದು ಇಷ್ಟೊಂದು ಆಭರಣ ಅಂತಲೇ ಚರ್ಚೆ ಮಾಡಿದ್ದು ಇದೆ.ಕೊರಳಲ್ಲಿರೋ ಹುಲಿ ಉಗುರಿನ ಪೆಂಡೆಂಟ್ ನೋಡಿ ಆಶ್ಚರ್ಯ ಪಟ್ಟದ್ದು ಇದೆ.

ಬಿಗ್ ಬಾಸ್ ಮನೆಯಲ್ಲಿದ್ದಾಗ ವರ್ತೂರು ಸಂತೋಷ್ ಆಭರಣ ಕಂಡ ಜನರೇನೊ ಸುಮ್ನೆ ಇರ್ತಾರೆ ಬಿಡಿ. ಆದರೆ ಈ ಅರಣ್ಯ ಅಧಿಕಾರಿಗಳು ಸುಮ್ನೆ ಇರಬೇಕಲ್ವೇ? ಹುಲಿ ಉಗುರು ಧರಿಸೋದು ಅಪರಾಧವೆ ಆಗುತ್ತದೆ. ಅದಕ್ಕೇನೆ ಮನೆಯೊಳಗೆ ಇದ್ದ ವರ್ತೂರು ಸಂತೋಷ್‌ನನ್ನ ಅರಣ್ಯ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ಕೂಡ ನಡೆಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿದ್ದ ವರ್ತೂರು ಸಂತೋಷ್ ಧರಿಸಿರೋದು ಹುಲಿ ಉಗುರೇನಾ? ಅಥವಾ ಕಾಡು ಬೆಕ್ಕಿನ ಉಗುರು ಕೂಡ ಇಷ್ಟೇ ದೊಡ್ಡದಾಗಿರುತ್ತದೆ. ಹಾಗೇನಾದ್ರೂ ಆದ್ರೆ ಅದು ಕೂಡ ಒಂದು ಲೆಕ್ಕದಲ್ಲಿ ತಪ್ಪೇ ಆಗುತ್ತದೆ. ಯಾವುದಕ್ಕೂ ಅಸಲಿ ವಿಚಾರ ಇನ್ನಷ್ಟೆ ಹೊರಬೀಳಬೇಕಿದೆ..!