ಯಲ್ಲಾಪುರ: ತನ್ನ ಗಂಡನನ್ನು ಕೊಲೆ ಮಾಡಿ ನಂತರ ಕಾಣೆಯಾಗಿದ್ದಾನೆ ಎಂದು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ ಕೊಲೆಯಾದವನ ಪತ್ನಿಯೂ ಸೇರಿದಂತೆ ಮೂವರು ಸಂಬಂಧಿಕರನ್ನು ಪೋಲಿಸರು ಬಂಧಿಸಿದ್ದಾರೆ.
ತಾಲೂಕಿನ ಬಳಗಾರದ ಗ್ರಾಮದ ಚಿಕ್ಕಮಾವಳ್ಳಿ ಯ ನಿವಾಸಿ ಕೂಲಿ ಕೆಲಸ ಮಾಡುತ್ತಿದ್ದ ರಾಜೇಶ ನಾರಾಯಣ ನಾಯ್ಕ(೨೯) ಕೊಲೆಯಾದನಾಗಿದ್ದಾನೆ. ಅವನ ಪತ್ನಿ ಶ್ವೇತಾ ರಾಜೇಶ ನಾಯ್ಕ (೨೯ ) ದೀಪಕ ಬುದ್ದಾ ಮರಾಠಿ ( ೫೩ )( ಮೃತನ ಮಾವ ) , ಗಂಗಾಧರ ದೀಪಕ ಮರಾಠಿ (೨೬ ವರ್ಷ) ( ಮೃತನ ಬಾವ ) ಯಮುನಾ ದೀಪಕ ಮರಾಠಿ(೫೦) ( ಮೃತನ ಅತ್ತೆ ) ಎಲ್ಲರೂ ಚಿಕ್ಕ ಮಾವಳ್ಳಿ ಯರಾಗಿದ್ದು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಮೃತನ ಪತ್ನಿ ಶ್ವೇತಾ ತನ್ನ ಗಂಡ ರಾಜೇಶ ನಾಯ್ಕ ಜೂನ್ ೧೦ ರಂದು ಸಂಜೆ ೦೭-೧೦ ಗಂಟೆಗೆ ಮನೆಯಿಂದ ಹೋದವನು ಇವರೆಗೂ ಮನೆಗೆ ಬಂದಿಲ್ಲವಾಗಿ ಕಾಣೆಯಾದ ಬಗ್ಗೆ ಯಲ್ಲಾಪುರ ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ಜೂ ೧೪ ರಂದು ದೂರು ನೀಡಿದ್ದಳು. ಪೋಲಿಸರು ಪ್ರಕರಣದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಶೋಧ ಕಾರ್ಯದಲ್ಲಿ ತೊಡಗಿದ್ದರು. ಯಲ್ಲಾಪುರದಲ್ಲಿದ್ದ ಕೊಲೆಯಾದಾತನ ಅಕ್ಕ ದೀಪಾ ನಾಯ್ಕ ಕೌಟುಂಬಿಕ ಕಲಹ ಹಿನ್ನಲೆ ಹಾಗೂ ಅನೈತಿಕ ಸಂಬಂಧದ ಕಾರಣಕ್ಕೆ ತಮ್ಮನ ಹೆಂಡತಿ ಹಾಗೂ ಅವಳ ತವರು ಮನೆಯವರು ಕೊಲೆ ಮಾಡಿರಬಹುದು ಶಂಕೆ ವ್ಯಕ್ತಪಡಿಸಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಳು.