ಮುಂಡಗೋಡ : ಆಚಾರ್ಯ ಪರಮಪೂಜ್ಯ ಶ್ರೀ ವಿದ್ಯಾಸಾಗರ ಮಹಾರಾಜರ ಸಮಾಧಿ ಸಂದರ್ಭದಲ್ಲಿ ಸಂಘದ ಸಮಸ್ತ ಸಾಧುಗಳ ಅನುಮೋದನೆ ಮೇರೆಗೆ ರವಿವಾರ ಮಧ್ಯಾಹ್ನವನ್ನು ಗಂಟೆಗೆ ವಿಶ್ವದ ಸಮಸ್ತ ಜೈನ ಸಮಾಜ ಬಾಂಧವರು ಗುರು ವಿನಯಾಂಜಲಿ ಸಭೆಯನ್ನು ಮುಂಡಗೋಡ ಮತ್ತು ಬಾಚಣಕಿ ಬಾಂಧವರು ಮುಂಡಗೋಡದ ಭಗವಾನ್ ಶ್ರೀ ಶಂಭವನಾಥ ತೀರ್ಥಂಕರರ ಜನಮಂದಿರದಲ್ಲಿ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಜೈನ ಸಮಾಜದ ಪ್ರಮುಖರಾದ ಡಾ.ಪಿ.ಪಿ.ಛಬ್ಬಿ, ಧರಣೇಂದ್ರ ಅಂಗಡಿ, ಬಾಹುಬಲಿ ಚಿವಟೆ, ಶ್ರೀಧರ ಛಬ್ಬಿ, ಪ್ರಜ್ವಲ ಕುತ್ತೆ, ಸುಜಯ ಚಿವಟೆ, ನೇಮಿನಾಥ ಚಿವಟೆ, ಅಭಿನಂದನ ಚಿವಟೆ, ಯಲ್ಲಪ್ಪ ಏಗಪ್ಪನವರ್, ಮುಂಡಗೋಡ ಮತ್ತು ಬಾಚಣಕಿ ಜೈನ ಬಾಂಧವರು ಇದ್ದರು.