ಪತಿ ಭೇಟಿಗಾಗಿ ಪೊಲೀಸ್ ಠಾಣೆಗೆ ಆಗಮಿಸಿದ ವಿಜಯ ಲಕ್ಷ್ಮಿ ದರ್ಶನ್..!

Spread the love

ಬೆಂಗಳೂರು: ಪತಿ ಭೇಟಿಗಾಗಿ ಆಗಮಿಸಿದ ವಿಜಯ ಲಕ್ಷ್ಮಿ ದರ್ಶನ್ ಅನ್ನಪೂರ್ಣಶ್ವೇರಿ ನಗರ ಪೋಲಿಸ್‌ ಠಾಣೆಗೆ ಆಗಮಿಸಿದ್ದಾರೆ. ಕಳೆದ ಒಂದು ವಾರದಿಂದ ರೇಣುಕಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ದರ್ಶನ್‌ ಪೊಲೀಸ್‌ ಕಸ್ಟಡಿಯಲ್ಲಿದ್ದು, ಪೊಲೀಸರ ಕಸ್ಟಡಿ ನಾಳೆಗೆ ಅಂತ್ಯವಾಗಲಿದೆ.
ಈ ನಡುವೆ ಯಾರು ಕೂಡ ದರ್ಶನ್‌ ಅವರನ್ನು ನೋಡಲು ಬರಲಿಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು. ಇದರ ನಡುವೆ ಇಂದು ವಿಜಯ ಲಕ್ಷ್ಮಿ ದರ್ಶನ್ ಆಗಮಿಸಿದ್ದು, ಎಲ್ಲರ ಕುತೂಹಲವನ್ನು ಹೆಚ್ಚಿಸಿದೆ.