ಮುಂಡಗೋಡ : ವಿಶ್ವ ಹಿಂದೂ ಪರಿಷತ್, ಭಜರಂಗದಳ ಇವರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನೆ, ಷಷ್ಟಿ ವರ್ಷದ ಕಾರ್ಯಕ್ರಮವನ್ನು ಕಾಳಗನಕೊಪ್ಪದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಗುರು ರುದ್ರಮುನಿ ಸ್ವಾಮೀಜಿ ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓಂ ಗ್ಯಾಸ್ ಮಾಲೀಕರಾದ ಬಸವರಾಜ ಓಸಿಮಠ ವಹಿಸಿದ್ದರು.
ವಿ.ಹಿಂ.ಪರಿಷತ್ತಿನ ತಾಲೂಕು ಅಧ್ಯಕ್ಷರಾದ ತಂಗಮ್ ಚಿನ್ನನ್, ವಿಶ್ವ ಹಿಂದೂ ಪರಿಷತ್ ತಾಲೂಕಾ ಕಾರ್ಯದರ್ಶಿ ಅಯ್ಯಪ್ಪ ಭಜಂತ್ರಿ, ಭಜರಂಗದಳ ತಾಲೂಕಾ ಸಂಚಾಲಕ ಶಂಕರ್ ಲಮಾಣಿ, ಪಟ್ಟಣ ಪಂಚಾಯತ್ ಸದಸ್ಯರಾದ ಶೇಖರ್ ಲಮಾಣಿ, ಉದ್ಯಮಿ ರಾಜೇಶ್ ರಾವ್, ಪಟ್ಟಣ ಪಂಚಾಯತ್ ಸದಸ್ಯರಾದ ಫಣಿರಾಜ್ ಹದಳಗಿ, ಮಂಜುನಾಥ್ ಲಮಾಣಿ, ನವೀನ್ ನಂದಿಕಟ್ಟ, ಮಂಜುನಾಥ ಮುಡಸಾಲಿ, ಮಂಜುನಾಥ್ ಹೆಚ್.ಪಿ., ಪ್ರಕಾಶ್ ಬಡಿಗೇರ್, ವಿಶ್ವನಾಥ ನಾಯರ್, ರಮೇಶ್ ಭೋವಿ, ಲಕ್ಷ್ಮಣ ಲಮಾಣಿ, ಚಂದ್ರು ಲಮಾಣಿ ಕರಗಿನಕೊಪ್ಪ, ಶಿವು ಮತಿಗಟ್ಟಿ, ಸುರೇಶ ಕರಗಿನಕೊಪ್ಪ. ಭಾಸ್ಕರ್ ಅಗಡಿ, ಮಲ್ಲು ಗೌಳಿ, ಶಾಂತಕುಮಾರ ಮುಡಸಾಲಿ, ಕಿರಣ ಚವ್ಹಾಣ ಮುಂತಾದವರಿದ್ದರು.
ಕಾರ್ಯಕ್ರಮದಲ್ಲಿ ಮುದ್ದು ಬಾಲಕೃಷ್ಣರನ್ನು ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.