ಮುಂಡಗೋಡ : ಖಾಸಗಿ ರಸಗೊಬ್ಬರಗಳ ಅಂಗಡಿಯಲ್ಲಿ ಯುರಿಯಾ ಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಇಂದು ರೈತ ಸಂಘದವರು ಮಹಾಲಕ್ಷ್ಮೀ ಆಗ್ರೋ ಟ್ರೆಡರ್ಸ ಮತ್ತು ಪ್ರಸನ್ನ ಆಗ್ರೋ ಟ್ರೆಡರ್ಸ ಅಂಗಡಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿರುವ ಈ ಎರಡು ಅಂಗಡಿಗಳ ಲೈಸನ್ಸ ರದ್ದು ಪಡಿಸುವಂತೆ ರೈತಸಂಘದವರು ಆಗ್ರಹಿಸಿದರು.
ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಅವರು, ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿರುವ ಈ ಎರಡು ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ರೈತಸಂಘದವರು ಅಲ್ಲಿಂದ ತೆರಳಿದರು.