ಬಸವನಹೊಂಡ ಸ್ವಚ್ಛಗೊಳಿಸುವಂತೆ ಬಿಜೆಪಿ ಯುವ ಮೋರ್ಚಾ ಮನವಿ

Spread the love

ಮುಂಡಗೋಡ : ನಗರದ ಬಸವನ ಹೊಂಡವನ್ನು ಸ್ವಚ್ಛಗೊಳಿಸುವಂತೆ ಬಿಜೆಪಿ ಯುವ ಮೋರ್ಚಾ ಮುಂಡಗೋಡ ಪಟ್ಟಣ ಪಂಚಾಯತ ಅಧ್ಯಕ್ಷರಿಗೆ, ಸದಸ್ಯರಿಗೆ ಮನವಿಯೊಂದು ಸಲ್ಲಿಸಿದೆ.

ಬಸವನ ಹೊಂಡದಲ್ಲಿ ಕಳೆದ 4-5 ವರ್ಷಗಳಿಂದ 4 ಜನರು ಸಾವನ್ನಪ್ಪಿದ್ದಾರೆ. ಹಿಂದುಗಳ ಆರಾಧ್ಯ ದೈವವಾದ ಗಣೇಶನನ್ನು ಗಣೇಶ ಹಬ್ಬದಲ್ಲಿ ಇದೇ ಹೊಂಡದಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಆದ ಕಾರಣ ಈ ಹೊಂಡವನ್ನು ಸ್ವಚ್ಛಗೊಳಿಸಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಅನುವು ಮಾಡಿಕೊಡಬೇಕೆಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಣೇಶ ಶಿರಾಲಿ ಅವರು ಪಟ್ಟಣ ಪಂಚಾಯತ ಅಧ್ಯಕ್ಷರಿಗೆ, ಸದಸ್ಯರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿನಾಯಕ ರಾಯ್ಕರ, ನಾಗರಾಜ ಕುನ್ನೂರ, ಭರತರಾಜ ಹದಳಗಿ, ವಿನಾಯಕ ಯಲಿಗಾರ, ಮನೋಜ ಕಡಗದವರ್, ಮಂಜುನಾಥ ರೇವಣಕರ, ಶೇಖರ ಲಮಾಣಿ, ರವಿ ಹಾವೇರಿ, ಸಂಜೀವ ಪಿಸೆ ಮುಂತಾದವರಿದ್ದರು.