ಒಂದೆರಡು ದಿನದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ – ಸಿಎಂ ಬೊಮ್ಮಾಯಿ

Spread the love

ಬೆಂಗಳೂರು : ರಾಜ್ಯದಲ್ಲಿ ನೂತನ ಸಂಚಿವ ಸಂಪುಟ ರಚನೆಯ ನಂತ್ರ, ಮೊದಲ ಸಂಪುಟ ಸಭೆಯನ್ನು ನಡೆಸಿದ ಬಳಿಕ, ಸಚಿವರಿಗೆ ಒಂದೆರಡು ದಿನಗಳಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದರು.

ಈ ಕುರಿತಂತೆ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ರಾಜ್ಯದಲ್ಲಿನ ಕೊರೋನಾ 3ನೇ ಅಲೆ ತಡೆ, ನೆರೆ, ಪರಿಹಾರ ಕಾಮಗಾರಿ ನಿರ್ವಹಣೆಗಾಗಿ ಸಚಿವರಿಗೆ ಹೊಣೆಗಾರಿಕೆ ವಹಿಸಲಾಗುತ್ತದೆ. ಸ್ಥಳೀಯವಾಗಿಯೇ ನೆರೆಯಿಂದಾಗಿ ಸಂತ್ರಸ್ತರಾದಂತವರಿಗೆ ಪರಿಹಾರ ನೀಡುವಂತ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.

ನಾಳೆಯೇ ಜಿಲ್ಲೆಗಳಿಗೆ ಪ್ರವಾಸ, ಪರಿಹಾರ ಕಾರ್ಯಕ್ಕೆ ಚುರುಕುಗೊಳಿಸಲಾಗುತ್ತದೆ. ಯಾವುದೇ ಸಚಿವರು ಇಂತದ್ದೇ ಖಾತೆ ಬೇಕು ಎಂಬುದಾಗಿ ಬೇಡಿಕೆ ಇಟ್ಟಿಲ್ಲ. ಒಂದೆರಡು ದಿನಗಳಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂಬುದಾಗಿ ಅವರು ಸ್ಪಷ್ಟ ಪಡಿಸಿದರು.