ಮುಂಡಗೋಡ : ಗಣೇಶ ಚತುರ್ಥಿ ಆಚರಿಸಲು ಅವಕಾಶ ಮಾಡಿಕೊಡಬೇಕೆಂದು ಹಿಂದು ಜಾಗರಣಾ ವೇದಿಕೆಯವರು ಇಂದು ತಹಶೀಲದಾರರಿಗೆ ಮನವಿ ಸಲ್ಲಿಸಿದ್ದಾರೆ.
ಈ ವರ್ಷ ಸರಕಾರ ನಿರ್ಬಂಧಗಳನ್ನು ಹೇರಿ ಕೋವಿಡ್ ಹೆಸರಿನಲ್ಲಿ ಪರೋಕ್ಷವಾಗಿ ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆ ಬಂದ್ ಮಾಡಲು ಯತ್ನಿಸುತ್ತಿರುವುದು ಹಿಂದುಗಳ ಧಾರ್ಮಿಕ ಮತ್ತು ಸಾಮಾಜಿಕ ಹಕ್ಕನ್ನು ಕಸಿದಂತೆ ಆಗಿದೆ. ಗಣೇಶ ಚತುರ್ಥಿ ಆಚರಣೆಗೆ ನಿರ್ಬಂಧ ಹೇರದೆ ಗಣೇಶ ಚತುರ್ಥಿ ಆಚರಿಸಲು ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಹಿಂದು ಜಾಗರಣಾ ವೇದಿಕೆಯ ತಾಲೂಕಾ ಅಧ್ಯಕ್ಷ ಪ್ರಕಾಶ ಬಡಿಗೇರ, ವಿಶ್ವನಾಥ ನಾಯರ, ಮಂಜುನಾಥ ಮೈಸೂರ, ಗಣೇಶ ಶಿರಾಲಿ, ಚಂದ್ರಕಾಂತ ಸಾಳುಂಕೆ ಮುಂತಾದವರಿದ್ದರು.