ಯಶಸ್ವಿಯಾಗಿ ನಡೆದ ಬಾಲಕೃಷ್ಣ ರೂಪಕ ಸ್ಪರ್ಧೆ ಹಾಗೂ ಯಶೋಧಾಮಯ್ಯ ರೂಪಕ ಸ್ಪರ್ಧೆ
ಮುಂಡಗೋಡ : ನವಚೇತನ ಯುವಕ ಮಂಡಳ ಟ್ರಸ್ಟ್ ಆಶ್ರಯದಲ್ಲಿ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ಬಾಲಕೃಷ್ಣ ರೂಪಕ ಸ್ಪರ್ಧೆ ಹಾಗೂ ಯಶೋಧಾಮಯ್ಯ ರೂಪಕ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಯಮಿ ಮಹೇಶ ಹೆಗಡೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ನವಚೇತನ ಯುವಕ ಮಂಡಳ ಟ್ರಸ್ಟ್ ಅಧ್ಯಕ್ಷರಾದ ಮಾರುತಿ ಓಂಕಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಎಂ.ಕೆ.ಗಡವಾಲೆ, ಜಗದೀಶ್ ವಾಲಿಶೆಟ್ಟರ್, ಡಾ.ಅಗರ್ವಾಲ್ ಐ ಕೇರ್ ನ ಪ್ರತಾಪ್, ಕಾರ್ಯಕ್ರಮದ ವ್ಯವಸ್ಥಾಪಕರಾದ ಡಾಕಿರಣ ಹುಲಗೂರ ಆಗಮಿಸಿದ್ದರು. ಶ್ರೀಧರ್ ಛಬ್ಬಿ, ಮಂಜುನಾಥ…