Headlines

ಆಫ್ಘನ್ ನಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದಬ್ಬಾಳಿಕೆ; ಭಾರತದಂತಹ ಶಾಂತಿಪ್ರಿಯ ದೇಶ ಎಲ್ಲೂ ಇಲ್ಲ; ಈಶ್ವರಪ್ಪ

Spread the love

ಶಿವಮೊಗ್ಗ : ಆಫ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದಬ್ಬಾಳಿಕೆ ನಡೆಯುತ್ತಿದೆ. ಪ್ರಪಂಚದಲ್ಲಿ ಮಾನವೀಯತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮನುಷ್ಯತ್ವ ಇಲ್ಲದ ಚಟುವಟಿಕೆಗಳು ಆಫ್ಘಾನಿಸ್ತಾನದಲ್ಲಿ ನಡೆಯುತ್ತಿವೆ. ಇದನ್ನೆಲ್ಲ ನೋಡಿ ನಮ್ಮ ದೇಶದ ಜನರು ಕಲಿಯಬೇಕಿದೆ. ಯಾವುದು ಒಳ್ಳೆಯದು ಎಂಬುದು ಜನ ತಿಳಿದುಕೊಳ್ಳಬೇಕು ಎಂದು ಈಶ್ವರಪ್ಪ ವಿಚಾರವಾದಿಗಳಿಗೆ ಸಲಹೆ ನೀಡಿದ್ದಾರೆ.

ನಮ್ಮ ದೇಶದಲ್ಲಿರುವಷ್ಟು ಶಾಂತಿಪ್ರಿಯತೆ, ಧರ್ಮ-ಧರ್ಮಗಳ ನಡುವಿನ ಸಹಿಷ್ಣುತೆ ಎಲ್ಲಿಯೂ ಇಲ್ಲ. ತಾಲಿಬಾನ್ ಉಗ್ರರ ದುಷ್ಕೃತ್ಯವನ್ನು ಎಲ್ಲರೂ ಖಂಡಿಸಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ.