ಶಿರೂರ ಗುಡ್ಡ ಕುಸಿತದಲ್ಲಿ ಸಿಲುಕಿಕೊಂಡ ಬೆಂಜ್ ಕಾರು, ಲಾರಿ….!

Spread the love

ಕಾರವಾರ : ಅಂಕೋಲಾ ತಾಲೂಕಿನ  ಶಿರೂರ ಗುಡ್ಡ ಕುಸಿತದಲ್ಲಿ ಬೆಂಜ್ ಕಾರು ಹಾಗೂ ಲಾರಿಯೊಂದು ಸಿಲುಕಿಕೊಂಡಿರುವುದು ಜಿಪಿಎಸ್‌ನಿಂದ ಪತ್ತೆಯಾಗಿದ್ದು, ಮಣ್ಣಿನ ಅಡಿಯಲ್ಲಿ ಹತ್ತಕ್ಕೂ ಹೆಚ್ಚು ಮಂದಿಯ ಮೃತ ದೇಹಗಳು ಸಿಲುಕಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. 

ನಿನ್ನೆ ಶಿರೂರು ಬಳಿ ನಡೆದ ಗುಡ್ಡಕುಸಿತ ಘಟನೆಯಲ್ಲಿ ಕಾರಿನ ಜೊತೆಗೆ ಹಳಿಯಾಳದಿಂದ ಕೇರಳಕ್ಕೆ ಸಂಚರಿಸುತ್ತಿದ್ದ ಶಿವಮೊಗ್ಗ ಜಿಲ್ಲೆಯ KA 15, A 7427 ಸಂಖ್ಯೆ ಹೊಂದಿರುವ ಲಾರಿ ಸಿಲುಕಿಕೊಂಡಿರುವುದು ಖಾತ್ರಿ ಆಗಿದೆ. ಈಗಾಗಲೆ ಲಾರಿಯ ಮಾಲೀಕರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಲಾರಿಯ ಜಿಪಿಎಸ್‌ ಸಹ ಇದೆ ಸ್ಥಳದಲ್ಲಿ ಕಾಣಿಸುತ್ತಿದೆ ಎಂದು ಲಾರಿ ಮಾಲೀಕರು ಮಾಹಿತಿ ನೀಡಿದ್ದಾರೆ. ಇದರ ಚಾಲಕ ಅರ್ಜುನ್ (30) ಮಣ್ಣಿನಲ್ಲಿಸಿಲುಕಿಕೊಂಡಿರುವುದಾಗಿ ಲಾರಿ ಮಾಲೀಕರು ಖಚಿತ ಪಡಿಸಿದ್ದಾರೆ. ಈ ಬಗ್ಗೆ ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.
ಮಣ್ಣಿನ ಅಡಿಯಲ್ಲಿ ಬೆಂಜ್ ಕಾರೊಂದು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಇದನ್ನು ಕಾರಿಗೆ ಅಳವಡಿಸಲಾಗಿದ್ದ ಜಿಪಿಎಸ್‌ ಮೂಲಕ ಪತ್ತೆ ಹಚ್ಚಲಾಗಿದ್ದು ಕಾರಿಗೆ ಸಂಬಂದಪಟ್ಟವರು ಸ್ಥಳಕ್ಕೆ ಬಂದಿದ್ದಾರೆಂದು ಹೇಳಲಾಗುತ್ತಿದೆ.
ಗುಡ್ಡ ಕುಸಿತದಲ್ಲಿ ಜೀವಕಳೆದುಕೊಂಡ ಈರ್ವರು ಶಿರಸಿ ನಗರಸಭೆಯ ಸದಸ್ಯ ನಾಗರಾಜ ನಾಯ್ಕ ಇವರ ಸಂಬಂಧಿಗಳಾಗಿದ್ದಾರೆನ್ನಲಾಗಿದೆ.