ನಾಟಿ ಮಾಡಲು ಸಸಿ ರೆಡಿ ಮಾಡಿದ ಗದ್ದೆ ಮುಳುಗಡೆ..!

Spread the love

ಮುಂಡಗೋಡ : ನಿರಂತರ ಮಳೆ ಸುರಿಯುತ್ತಿರುವ ಪರಿಣಾಮವಾಗಿ ನಾಟಿ ಮಾಡಲು ಸಸಿ ರೆಡಿ ಮಾಡಿದ ಗದ್ದೆಯು ಸಸಿಗಳ ಸಮೇತ ಮುಳುಗಡೆಯಾಗಿರುವ ಘಟನೆ ತಾಲೂಕಿನ ಚಿಗಳ್ಳಿಯಲ್ಲಿ ನಡೆದಿದೆ. 

ಚಿಗಳ್ಳಿಯ ರೈತ ಕಮಲೇಶ್ ಆಲದಕಟ್ಟೆ ಅವರು ನಾಟಿ ಮಾಡಲು ಗದ್ದೆಯಲ್ಲಿ ಸಸಿಗಳನ್ನು ರೆಡಿ ಮಾಡಿದ್ದರು. ನಿರಂತರವಾಗಿ ಸುರಿಯುತ್ತಿರುವ ಕಾರಣ ನಾಟಿ ಮಾಡಲು ಸಸಿ ರೆಡಿ ಮಾಡಿದ ಗದ್ದೆಯೇ ಈಗ ಮುಳುಗಡೆಯಾಗಿ ರೈತ ಕಮಲೇಶ ಆಲದಕಟ್ಟಿ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವರ ನೆರವಿಗೆ ತಾಲೂಕ ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಆಗಮಿಸಿ, ಸೂಕ್ತ ಪರಿಹಾರ ಹಾಗೂ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.