ಮುಂಡಗೋಡ ತಾಲೂಕ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

Spread the love

ಮುಂಡಗೋಡ : ಇಂದು ನಡೆಯುತ್ತಿರುವ ಮಂದಗೋಡ ತಾಲೂಕ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜಾರೋಹಣವನ್ನು ತಹಶೀಲದಾರ ಶಂಕರ ಗೌಡಿ ನೆರವೇರಿಸಿದರು. ಪರಿಷತ್ತಿನ ಧ್ವಜಾರೋಹಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್.ವಾಸರೆ ಹಾಗೂ ಕನ್ನಡ ಧ್ವಜಾರೋಹಣವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷರಾದ ವಸಂತ ಕೊಣಸಾಲಿ ನೆರವೇರಿಸಿದರು.  

ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಮಾಜಿ ಶಾಸಕ ವಿ.ಎಸ್.ಪಾಟೀಲ ಉದ್ಘಾಟಿಸಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಚಿದಾನಂದ ಪಾಟೀಲ್ ಧ್ವಜಾ ಹಸ್ತಾಂತರಿಸಿದರು. ಡಾ.ಪಿ.ಪಿ.ಛಬ್ಬಿ ವೆದಿಕೆ ಪರಿಚಯಿಸಿದರು. ಎಸ್.ಕೆ.ಬೋರ್ಕರ ಮುಖ್ಯದ್ವಾರ ಪರಿಚಯಿಸಿದರು.  

ಶಿಕ್ಷಣ ಪ್ರೇಮಿ ಎಸ್.ಫಕ್ಕೀರಪ್ಪ ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಿದ್ದರು.

ವಿಶ್ವನಾಥ ಹಿರೇಮಠ ಪ್ರಾರ್ಥಿಸಿದರು. ನಯನಾ ಕಾಮತ್ ಸಂಗಡಿಗರು ನಾಡಗೀತೆ ಹಾಡಿದರು. ಬಾಲಚಂದ್ರ ಹೆಗಡೆ, ದಿನೇಶ ವೆರ್ಣೇಕರ, ಶಹನಾಜ ದೊಡ್ಮನಿ ಕಾರ್ಯಕ್ರಮ ನಿರೂಪಿಸಿದರು. ಕ.ಸಾ.ಪ. ತಾಲೂಕಾ ಗೌರವ ಕಾರ್ಯದರ್ಶಿ ಎಸ್.ಡಿ.ಮೂಡಣ್ಣವರ್, ಗೌರವ ಕೋಶಾಧ್ಯಕ್ಷರಾದ ನಾಗರಾಜ ಅರ್ಕಸಾಲಿ ಇದ್ದರು.

ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಉದ್ಘಾಟಿಸಿದರು. ಶಾಸಕ ಶಿವರಾಮ ಹೆಬ್ಬಾರ ವೇದಿಕೆ ಉದ್ಘಾಟಿಸಿದರು.
ಶಮಿತಾ ನಾಯ್ಕ ಮತ್ತು ವಿನುತಾ ಮೊಗವೀರ ಭರತನಾಟ್ಯ ಮಾಡಿದರು.