Headlines

ಹಬ್ಬದ ದಿನವೇ ದಂಪತಿಯ ಬರ್ಬರ ಹತ್ಯೆ, ಹಾಡಹಗಲೇ ನಡೆಯಿತು ಜೋಡಿಕೊಲೆ

Spread the love

ಬೆಂಗಳೂರು: ಎಲ್ಲರೂ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಇರುವಾಗ ಇಲ್ಲೊಂದು ಮನೆಯಲ್ಲಿ ಶೋಕದ ವಾತಾವರಣ ಉಂಟಾಗಿದೆ. ಹಬ್ಬದ ದಿನದಂದೇ ದುಷ್ಕರ್ಮಿಗಳು ಲಾಂಗು ಝಳಪಿಸಿದ್ದು, ಎರಡು ಜೀವಗಳು ಬಲಿಯಾಗಿವೆ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್​ನ ಕಾಶಿನಗರದ ಶಾಂತರಾಜು ಹಾಗೂ ಪ್ರೇಮಲತಾ ದಂಪತಿ ಕೊಲೆಯಾದವರು. ಹಾಡಹಗಲೇ ದಾಳಿ ಇಟ್ಟ ದುಷ್ಕರ್ಮಿಗಳು ಈ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಕುಮಾರಸ್ವಾಮಿ ಬಡಾವಣೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಯಾಕೆ ಯಾರು ಈ ಕೃತ್ಯವೆಸಗಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.