ಕ್ಯಾಸನಕೇರಿ-ಚವಡಳ್ಳಿ ರಸ್ತೆ ಬಂದ್

ಮುಂಡಗೋಡ : ಭಾರೀ ಮಳೆಯಿಂದಾಗಿ ತಾಲೂಕಿನ ಕ್ಯಾಸನಕೇರಿ ಗ್ರಾಮದ ಹಳ್ಳದ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಕ್ಯಾಸನಕೇರಿ ಮತ್ತು ಚವಡಳ್ಳಿ ರಸ್ತೆ ಬಂದ್ ಆಗಿದೆ. ಭಾರೀ ಮಳೆಯಿಂದಾಗಿ ನಂದಿಕಟ್ಟಾ-ಯರೇಬೈಲ್ ರಸ್ತೆ ಬಂದ್ ಆಗಿದೆ. ಇಂದೂರ-ಕಲಘಟಗಿ ರಸ್ತೆ ನೀರು ಆವರಿಸಿದೆ. ಮುಂಡಗೋಡ ಪಟ್ಟಣದ ಹಳೂರ ಶಾಲೆ ಕಟ್ಟಡ ಮಳೆಯಿಂದಾಗಿ ಕುಸಿದಿದೆ. ಇಂದೂರ ಗ್ರಾಮದಲ್ಲಿ 10 ಮನೆಗಳಿಗೆ ನೀರು ತುಂಬಿದೆ.

Read More

ನೆರೆ, ತುರ್ತು ಕಾರ್ಯಾಚರಣೆಗೆ ಸನ್ನದ್ಧರಾಗುವಂತೆ ಸಚಿವ ಹೆಬ್ಬಾರ್ ಸೂಚನೆ.

ಮುಂಡಗೋಡ : ನೆರೆ ಹಾಗೂ ತುರ್ತು ಕಾರ್ಯಾಚರಣೆಗೆ ಸನ್ನದ್ಧರಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಗಳಿಗೆ ಸೂಚನೆ ನೀಡಿದ್ದಾರೆ. ಉತ್ತರಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ವರ್ಷಧಾರೆಯಿಂದ ಅನೇಕ ಕಡೆಗಳಲ್ಲಿ ಸಮಸ್ಯೆಗಳು ಉದ್ಬವಿಸಿದ್ದು ಯಾವುದೇ ಅವಘಡಗಳು ಸಂಭವಿಸದಂತೆ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಸನ್ನದ್ದರಾಗಿದ್ದು ಪರಿಹಾರ ಕಾರ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಮೌಕಿಕ ಆದೇಶ ನೀಡಿದ್ದಾರೆ. ನೆರೆ ಅಥವಾ ತುರ್ತು ಕಾರ್ಯಾಚರಣೆಗಾಗಿ ಅಧಿಕಾರಿಗಳು ಸನ್ನದ್ದರಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಹಾಗು…

Read More

ಮನೆ ಮದ್ದು

ಕಣ್ಣುನೋವು, ತಲೆನೋವು ಶಮನಗೊಳ್ಳಲು ಈರುಳ್ಳಿ ಸೇವನೆ ಉತ್ತಮ. ಬೆಲ್ಲದೊಂದಿಗೆ ಈರುಳ್ಳಿಯನ್ನು ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ.

Read More

ಕುಸಿದ ಹನುಮಾಪುರ ಸರಕಾರಿ ಶಾಲೆ

ಮುಂಡಗೋಡ : ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಹನುಮಾಪುರ ಗ್ರಾಮದಲ್ಲಿನ ಸರಕಾರಿ ಪ್ರಾಥಮಿಕ ಶಾಲೆ ಕುಸಿದಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ತಾಲೂಕಿನ ಹುನಗುಂದ ಹಾಗೂ ಲಕ್ಕೊಳ್ಳಿ ಗ್ರಾಮದಲ್ಲಿ ಮನೆ ಕುಸಿತಗೊಂಡಿವೆ. ತಾಲೂಕಿನ ಹುನಗುಂದ ಗ್ರಾಮದ ರೇಣವ್ವ ಕಣವಿ ಹಾಗೂ ಲಕ್ಕೊಳ್ಳಿ ಗ್ರಾಮದ ಶೋಭಾ ಕಿಳ್ಳಿಕ್ಯಾತರ್ ಎಂಬವರ ಮನೆಯೂ ಮಳೆಗೆ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಕಂದಾಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ರಸ್ತೆಯ ಮೇಲೆ ನೀರು : ವಾಹನ ಸವಾರರ ಪರದಾಟ

ಮುಂಡಗೋಡ: ನಗರ ಮತ್ತು ತಾಲೂಕಿನಾದ್ಯಂತ ಎಲ್ಲಾ ಕಡೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಪಟ್ಟಣದ ಹೊರವಲಯದ ಯಲ್ಲಾಪುರ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ರಸ್ತೆಯ ಅಂಚಿನಲ್ಲಿನ ಚರಂಡಿಗಳಲ್ಲಿ ಸಮರ್ಪಕವಾಗಿ ನೀರು ಹರಿದು ಹೋಗದೆ ರಸ್ತೆಯ ಮೇಲೆ ನೀರು ನಿಲ್ಲುತ್ತಿದೆ. ಇದರಿಂದ ಬೈಕ್ ಹಾಗೂ ಕಾರುಗಳು ಬೇರೆ ಮಾರ್ಗವಾಗಿ ಸಂಚರಿಸುವ ಪರಿಸ್ಥಿತಿ ಬಂದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.

Read More

ಮನೆ ಮದ್ದು

ಕಣ್ಣುನೋವು, ತಲೆನೋವು ಶಮನಗೊಳ್ಳಲು ಈರುಳ್ಳಿ ಸೇವನೆ ಉತ್ತಮ. ಬೆಲ್ಲದೊಂದಿಗೆ ಈರುಳ್ಳಿಯನ್ನು ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ.

Read More

ಬಕ್ರೀದ್ ಆಚರಣೆ

ಮುಂಡಗೋಡ : ತ್ಯಾಗ, ಬಲಿದಾನದ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಮುಸ್ಲೀಮ ಬಾಂಧವರು ಇಂದು ಆಚರಿಸಿದರು. ಮಸೀದಿಯಲ್ಲಿ ಎಲ್ಲರೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ನಂತರ ಪರಸ್ಪರ ಹಬ್ಬದ ಶುಭಾಶಯ ಕೋರಿದರು.

Read More