ಯುವಕನ ಕೊಲೆ

ಮುಂಡಗೋಡ : ಮುಂಡಗೋಡ. ಪಟ್ಟಣದ  ಅಯ್ಯಪ್ಪ   ಸ್ವಾಮಿ  ದೇವಸ್ಥಾನದ  ಸನಿಹದಲ್ಲಿ  ವ್ಯಕ್ತಿಯೊಬ್ಬನನ್ನು   ಚಾಕುವಿನಿಂದ  ಕುತ್ತಿಗೆ  ಕೊಯ್ದು ಬೀಕರವಾಗಿ   ಕೊಲೆಯಾದ  ಘಟನೆ  ಭಾನುವಾರ  ನಸುಕಿನ  ಜಾವ  ನಡೆದಿದೆ.  ಪಟ್ಟಣದ  ಕಂಬಾರಗಟ್ಟಿಯ ನಿವಾಸಿ  ವಿಜಯ ಈಳಿಗೇರ (25) ಎಂಬವನೇ  ಕೊಲೆಯಾದ  ವ್ಯಕ್ತಿಯಾಗಿದ್ದಾನೆ.  ವಿಜಯ  ತನ್ನ  ಕೆಎ 31ಇಬಿ7686 ಬೈಕ್ ಮೇಲೆ  ಬಂದಿದ್ದು  ಈ  ವೇಳೆ  ಯಾವುದೊ  ವಿಷಯಕ್ಕೆ ಬೇರೆಯವರೊಂದಿಗೆ   ಜಗಳ  ಮಾಡಿಕೊಂಡಿದ್ದು  ಈ  ವೇಳೆ  ಆರೋಪಿಗಳು  ವಿಜಯನ ತಲೆಗೆ  ಹೊಡೆದು  ನಂತರ  ಚಾಕುವಿನಿಂದ  ಕುತ್ತಿಗೆ  ಕೊಯ್ದು  ಕೊಲೆ  ಮಾಡಿ  ರಸ್ತೆ …

Read More

ರಾಘವೇಂದ್ರ ಟಪಾಲದವರ್ ನೇಮಕ

ಮುಂಡಗೋಡ: ಜೈಭೀಮ ದಲಿತ ಸೇನಾ ಸಮಿತಿಯ ಉತ್ತರಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಮುಂಡಗೋಡದ ರಾಘವೇಂದ್ರ ಟಪಾಲದವರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜೈಭೀಮ ದಲಿತ ಸೇನಾ ಸಮಿತಿಯ ರಾಜ್ಯಾಧ್ಯಕ್ಷ ಮುಳ್ಳೂರ ಶ್ರೀನಿವಾಸ ತಿಳಿಸಿದ್ದಾರೆ.

Read More

ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ : ಬಿ.ಕೆ.ಹರಿಪ್ರಸಾದ

ಮುಂಡಗೋಡ : ೨೦ ಲಕ್ಷ ಕೋಟಿ ಪಿಎಂ ಕೇರ್ ಹಣದಲ್ಲಿ ೨೦ ಸಾವಿರ ಕೋಟಿ ಹಣವನ್ನೂ ಲಸಿಕೆಗೆ ಖರ್ಚು ಮಾಡಿಲ್ಲ ಈ ಸರ್ಕಾರ. ಮಾನವೀಯತೆ ಇಲ್ಲದವರು ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಮಂತ್ರಿಗಳಾಗಿದ್ದಾರೆ. ಎರಡೂ ಸರ್ಕಾರಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಕೋವಿಡ್ ವಿಷಯದಲ್ಲಿ ನಿಜವನ್ನು ಹೇಳುವಲ್ಲಿ ವಿಫಲವಾಗಿದೆ. ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಬರೀ ಪೊಳ್ಳು ಭರವಸೆಗಳ ಮೂಲಕ ಜನರ ದಾರಿತಪ್ಪಿಸುತ್ತಿದೆ. ಹಾಗಾಗಿಯೇ  ಕೊರೊನಾ ನಿರ್ವಹಣೆ ಪ್ರಕರಣಗಳಲ್ಲಿ ಸರ್ಕಾರದ…

Read More

ವರ್ತಿಕಾ ಅವರಿಗೆ ಸಿಗದ ವರ್ಗಾವಣೆ ಆದೇಶ : ಎಸ್.ಪಿ. ಮತ್ತೆ ಬದಲಾವಣೆ…..?

ಕಾರವಾರ : ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಶಿವಪ್ರಕಾಶ್ ದೇವರಾಜುರನ್ನು ಎರಡು ದಿನದ ಹಿಂದೆ ವರ್ಗಾವಣೆ ಮಾಡಿ ವರ್ತಿಕಾ ಕಟಿಯಾರ್‌ರನ್ನು ಎಸ್ಪಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ವರ್ತಿಕಾ ಕಟಿಯಾರ್ ಸಹ ಬದಲಾಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಶಿವಪ್ರಕಾಶ್ ದೇವರಾಜು ವರ್ಗಾವಣೆ ಮಾಡಲು ಪ್ರಯತ್ನ ನಡೆಸಿ, ಈ ಹಿಂದೆ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಕೆ.ಜಿ. ದೇವರಾಜ್‌ರನ್ನು ಅವರ ಜಾಗಕ್ಕೆ ತರಲು…

Read More

S.S.L.C. ಪರೀಕ್ಷೆಗೆ ಸಕಲ ಸಿದ್ದತೆ

ಮುಂಡಗೋಡ : S.S.L.C. ಪರೀಕ್ಷೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮುಂಡಗೋಡ ತಹಶೀಲದಾರ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ. 1562 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಲಿದ್ದಾರೆ. ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ನೀಡಲು ಈಗಾಗಲೇ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಬಸ್ ಸೌಕರ್ಯಗಳಿಲ್ಲದಿದ್ದರೆ ಖಾಸಗಿ ಶಾಲಾ ವಾಹನ, ಇಲಾಖೆ ವಾಹನಗಳನ್ನು ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು. 256 ಸಿಬ್ಬಂದಿಗಳನ್ನು ನೇಮಿಸಲಾಗಿದೆ….. ಎಸ್.ಎಸ್.ಎಲ್.ಸಿ. ಪರೀಕ್ಷೆಗಾಗಿ ತಾಲೂಕಿನಲ್ಲಿ ಒಟ್ಟು 7 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. 769 ವಿದ್ಯಾರ್ಥಿಗಳು ಮತ್ತು 793 ವಿದ್ಯಾರ್ಥಿನಿಯರು ಸೇರಿ…

Read More

ಮನೆ ಮದ್ದು

ಹರಿವೆ ಸೊಪ್ಪಿಗೆ ಅರಿಶಿಣ ಸೇರಿಸಿ ಅರೆದು ಚರ್ಮಕ್ಕೆ ಹಚ್ಚಿದರೆ ಚರ್ಮದ ಕಾಂತಿ ಹೆಚ್ಚುತ್ತದೆ. ಹರಿವೆ ಸೊಪ್ಪಿನಿಂದ ರಸ ತೆಗೆದು ನಿತ್ಯವೂ ಎರಡು ಸಾರಿ ಸೇವಿಸಿದರೆ ಶರೀರಕ್ಕೆ ಪೋಷಕಾಂಶಗಳು ದೊರೆಯುತ್ತದೆ.

Read More

ಬಂಗಾರ ನೀಡುವುದಾಗಿ ೨೮ಲಕ್ಷರೂ. ಪಂಗನಾಮ

ಮುಂಡಗೋಡ: ಅಪರಿಚಿತ ವ್ಯಕಿಗಳು ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ನಂಬಿಸಿ ಹಣ ತೆಗೆದುಕೊಂಡು ಬಂಗಾರ ಖರೀದಿಗೆ ಬಂದಿದ್ದ ವ್ಯಾಪಾರಸ್ಥರ ೨೮ಲಕ್ಷ ರೂ. ಹಣದ ಬ್ಯಾಗ್‌ನ್ನು ಕಸಿದುಕೊಂಡು ಪರಾರಿಯಾದ ಘಟನೆ ತಾಲೂಕಿನ ಮಳಗಿ ಧರ್ಮಾ ಜಲಾಶಯದ ಬಳಿ ಶುಕ್ರವಾರ ಜರುಗಿದೆ. ಚಿಕ್ಕೋಡಿ ತಾಲೂಕಿನ ಶಿವನಗೌಡ ಪಾಟೀಲ ಹಾಗೂ ಆತನ ಸ್ನೇಹಿತ ಅಸ್ಲಂ ನದಾಫ್ ಎಂಬವರೆ ಹಣ ಕಳೆದುಕೊಂಡ ವ್ಯಾಪಾರಸ್ಥರಾಗಿದ್ದಾರೆ. ನಮಗೆ ಹಳೆಯ ಬಂಗಾರದ ಸಿಕ್ಕಿದೆ ಅದನ್ನು ಮಾರಾಟ ಮಾಡುತ್ತೇವೆ ಎಂದು ಶಿವನಗೌಡ ಪಾಟೀಲಗೆ ಅಪರಿಚಿತರು ನಂಬಿಸಿ ಅರ್ಧ ಕೆಜಿಗೂ…

Read More