ಯಲ್ಲಾಪುರದಲ್ಲಿ ಅಂತರ ಜಿಲ್ಲಾ ಕಳ್ಳರ ಬಂಧನ : 2 ಲಕ್ಷರೂ. ಮೌಲ್ಯದ ಚಿನ್ನಾಭರಣ ವಶ
Share Now ಯಲ್ಲಾಪುರ : ಅಪ್ರಾಪ್ತ ಬಾಲಕ ಸೇರಿ ಅಂತರ ಜಿಲ್ಲಾ ಕಳ್ಳರಿಬ್ಬರನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ ಸುಮಾರು 2 ಲಕ್ಷ 20 ಸಾವಿರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡ ಘಟನೆ ಯಲ್ಲಾಪುರದಲ್ಲಿ ಇಂದು ನಡೆದಿದೆ. ಧಾರವಾಡ ಜಿಲ್ಲೆಯ ಲಕ್ಷ್ಮೀಸಿಂಗನಕೇರಿ ಮೂಲದ ಹುಲಗಪ್ಪ ಹುಲಗೇಶ ಬಂಡಿವಡ್ಡರ (32) ಹಾಗೂ ಇನ್ನೊಬ್ಬ ಅಪ್ರಾಪ್ತನ ಬಂಧನ ಮಾಡಲಾಗಿದ್ದು, ಇನ್ನೊಬ್ಬ ಆರೋಪಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 2020 ರ ಡಿಸೆಂಬರ್ ನಲ್ಲಿ ಯಲ್ಲಾಪುರದ ಶಾರದಾ ನಗರದ ಮನೆಯೊಂದರ ಬೀಗ ಮುರಿದು ಕಳ್ಳತನ…
7ರಂದು ಶಿರಸಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Share Now ಶಿರಸಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಶಿರಸಿಗೆ ಆಗಮಿಸಿ ಎಐಸಿಸಿ ನಿರ್ದೇಶನದಂತೆ ನಡೆಯಲಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ನಡೆಯಲಿರುವ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಜುಲೈ 7 ರಂದು ಬೆಳಿಗ್ಗೆ 10 ಗಂಟೆಗೆ ಆಗಮಿಸುವ ಡಿ.ಕೆ. ಶಿವಕುಮಾರ್ ಶಿರಸಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಬೃಹತ್ ಸೈಕಲ್ ಜಾಥಾ ನಡೆಸಿ ಪ್ರತಿಭಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕೆಪಿಸಿಸಿ ಉಸ್ತುವಾರಿಗಳು,ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಂಸದರು, ಮಾಜಿ ಶಾಸಕರು,…
ಮಹಿಳಾ ಉದ್ಯಮಿಯೊಂದಿಗೆ ಆನ್ ಲೈನ್ ಸಂವಾದ ಕಾರ್ಯಕ್ರಮ
Share Now ಮುಂಡಗೋಡ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ವತಿಯಿಂದ ನಾಳೆ ಸೋಮವಾರ ದಿ. 05.07.2021ರ ಬೆಳಗಿನ 11 ಗಂಟೆಗೆ ಯಶಸ್ವಿ ಮಹಿಳಾ ಉದ್ಯಮಿ ಯೊಂದಿಗೆ ಆನ್-ಲೈನ್ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ಮಹಿಳಾ ಶಿಭಿರಾರ್ಥಿಗಳು ಹಾಗೂ ಎಲ್ಲ ಮಹಿಳಾ ನವೊದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಈ ಆನ್-ಲೈನ್ ಕಾರ್ಯಾಗಾರಕ್ಕೆ ತಾವು ತಮ್ಮ ಮೊಬೈಲ್ ಮೂಲಕವೇ ಭಾಹವಹಿಸಬಹುದು. ಆಸಕ್ತರು ನಾಳೆ ಸರಿಯಾಗಿ ಬೆಳಿಗ್ಗೆ 11.00 ಗಂಟೆಗೆ ಈ ಕೆಳಗಿನ ಲಿಂಕ್ ಮೂಲಕ ಆನ್-ಲೈನ್ ವೆಬಿನಾರಲ್ಲಿ ಭಾಗವಹಿಸಬಹುದು. Link…
ಓರ್ವ ಯುವತಿ, ಓರ್ವ ಅಪ್ರಾಪ್ತ ಬಾಲಕಿ ನಾಪತ್ತೆ
Share Now ಮುಂಡಗೋಡ : ಓರ್ವ ಯುವತಿ ಮತ್ತು ಓರ್ವ ಅಪ್ರಾಪ್ತ ಬಾಲಕಿಯೊಬ್ಬಳು ನಾಪತ್ತೆಯಾದ ಪ್ರಕರಣವೊಂದು ಮುಂಡಗೋಡ ತಾಲೂಕಿನಲ್ಲಿ ನಡೆದಿದೆ. ಇಂದೂರ ಗ್ರಾಮದ ಭಾಗ್ಯಲಕ್ಷ್ಮೀ ತಡಸದ ಎಂಬ ಯುವತಿಯು ಮನೆಯಲ್ಲಿ ವ್ಯಾಕ್ಸಿನ್ ಪಡೆದು ರಿಪೋರ್ಟ ಕಾಲೇಜಿಗೆ ಕೊಟ್ಟು ಬರುತ್ತೇನೆಂದು ಹೇಳಿ ಹೋದವಳು ಈವರೆಗೂ ನಾಪತ್ತೆಯಾಗಿದ್ದಾಳೆ. ಕಾಳಗನಕೊಪ್ಪ ಗ್ರಾಮದ ಅಪ್ರಾಪ್ತೆ ಬಾಲಕಿಯು ಹೊಲಿಗೆ ಕ್ಲಾಸಿಗೆ ಹೋಗಿ ಬರುತ್ತೇನೆಂದು ತನ್ನ ಮನೆಯಲ್ಲಿ ಹೇಳಿ ಹೋದವಳು ನಾಪತ್ತೆಯಾಗಿದ್ದಾಳೆ. ತೇಜಸ್ವಿನಿ ಬೆಂಡ್ಲಗಟ್ಟಿ ಎಂಬಾಕೆಯೇ ನಾಪತ್ತೆಯಾದ ಅಪ್ರಾಪ್ತೆ ಬಾಲಕಿಯಾಗಿದ್ದಾಳೆ. ಈ ಬಗ್ಗೆ ಪೊಲೀಸರು…
ಅನುದಾನದ ಬಳಕೆ ಬಗ್ಗೆ ಕೇಂದ್ರ ಸರಕಾರ ಹದ್ದಿನ ಕಣ್ಣಿಟ್ಟಿದೆ : ಸಂಸದ ಅನಂತಕುಮಾರ್ ಹೆಗಡೆ
Share Now ಕಾರವಾರ : ಜಲ ಜೀವನ ಮಿಷನ್, ನರೇಗಾ, ವಸತಿ, ಆರೋಗ್ಯ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ನೇರವಾಗಿ ನೀಡುತ್ತಿರುವ ವಿಶೇಷ ಅನುದಾನದ ಬಳಕೆ ಬಗ್ಗೆ ಕೇಂದ್ರ ಸರಕಾರ ಹದ್ದಿನ ಕಣ್ಣಿಟ್ಟಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ತಿಳಿಸಿದರು. ಜಿಲ್ಲಾ ಪಂಚಾಯತ್ನ ಸಭಾಭವನದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ…
ಎಲ್ಲ ಬಿಪಿಎಲ್ ಕಾರ್ಡದಾರರಿಗೆ ರೇಶನ್ ಕಿಟ್ ನೀಡುತ್ತಿದ್ದೇವೆ : ಸಚಿವ ಹೆಬ್ಬಾರ್
Share Now ಮುಂಡಗೋಡ : ಮೂರು ಬಾರಿ ನನ್ನನ್ನು ಆಯ್ಕೆ ಮಾಡಿ ಕಳಿಸಿದ್ದೀರಿ. ನಿಮ್ಮ ಋಣ ನನ್ನ ಮೇಲಿದೆ. ಈಗ ನೀವು ಸಂಕಷ್ಟದಲ್ಲಿದ್ದಾಗ ಭಾಗಿಯಾಗುವುದು ನನ್ನ ಕರ್ತವ್ಯ. ಅದಕ್ಕಾಗಿ 63 ಸಾವಿರ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ದಾರರಿಗೆ ದಿನಸಿ ಕಿಟ್ಗಳನ್ನು ಸ್ವಂತ ಖರ್ಚಿನಿಂದ ನೀಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಇಂದು ಅವರು ತಾಲೂಕಿನ ಮೈನಳ್ಳಿ ಹಾಗೂ ಉಗ್ಗಿನಕೇರಿ ಗ್ರಾಮದಲ್ಲಿ ಹೆಬ್ಬಾರ್ ರೇಶನ್ ಕಿಟ್ಗಳನ್ನು ವಿತರಿಸಿ ಮಾತನಾಡುತ್ತಿದ್ದರು. ಯಾವುದೇ…
ಮುಂಡಗೋಡ : 5 ವರ್ಷದಲ್ಲಿ 19 ಜನ ರೈತರ ಆತ್ಮಹತ್ಯೆ….!
Share Now ಮುಂಡಗೋಡ : ಸರಿಯಾಗಿ ಬೆಳೆಬಾರದ ಕಾರಣ, ಬೆಳೆಸಾಲವೂ ತೀರಿಸಲಾಗದ ಹಿನ್ನೆಲೆಯಲ್ಲಿ ಕಳೆದ 5 ವರ್ಷದಿಂದ ಮುಂಡಗೋಡ ತಾಲೂಕಿನಲ್ಲಿ ಈವರೆಗೆ ಒಟ್ಟು 19 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಂಕ ಹಾಗೂ ಸೊಸೈಟಿಯಲ್ಲಿ ಸಾಲ ತುಂಬುವಂತೆ ಒತ್ತಡ ಹೇರುತ್ತಿರುವುದರಿಂದ ರೈತರು ಮನನೊಂದು ಆತ್ಮಹತ್ಯೆ ಎಂಬ ಕೃತ್ಯಕ್ಕೆ ಕೈಹಾಕುತ್ತಿದ್ದಾರೆ. 2021-21ನೇ ಸಾಲಿನಲ್ಲಿ ಅತಿ ಹೆಚ್ಚು ರೈತರು ಅಂದರೆ 7 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2017-18ರಲ್ಲಿ 3 ಜನ ರೈತರು, 2018-19ರಲ್ಲಿ 4 ಜನ ರೈತರು, 2019-20ರಲ್ಲಿ 3 ಜನ…