ವರುಣಾ ಕಣಕ್ಕೆ ಸಿದ್ದರಾಮಯ್ಯ ಮೊಮ್ಮಗನ ಎಂಟ್ರಿ : ತಾತನ ಚುನಾವಣಾ ಪ್ರಚಾರಕ್ಕೆ ಧವನ್ ರಾಕೇಶ್ ಸಾಥ್

Spread the love

ಮೈಸೂರು : ವರುಣಾ ಕಣಕ್ಕೆ ಸಿದ್ದು ಮೊಮ್ಮಗನ ಎಂಟ್ರಿಯಾಗಿದ್ದು, ತಾತನ ಪರ ಧವನ್ ರಾಕೇಶ್ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.

ಹೌದು, ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಚುನಾವಣಾ ಕಣ ರಂಗೇರುತ್ತಿದೆ.

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸುತ್ತಿದ್ದು, ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಮಣ್ಣ ನಡುವೆ ಭಾರೀ ಫೈಟ್ ನಡೆಯಲಿದೆ.

ಇದರ ನಡುವೆ ಏರ್ ಪೋರ್ಟ್ ನಲ್ಲಿ ತಾತ ಸಿದ್ದರಾಮಯ್ಯ ಜೊತೆ ಧವನ್ ಕಾಣಿಸಿಕೊಂಡಿದ್ದು, ಸಿದ್ದರಾಮಯ್ಯ ಫುಲ್ ಖುಷಿಯಾಗಿದ್ದಾರೆ. ಮೊಮ್ಮಗನ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ ಸಿದ್ದರಾಮಯ್ಯ ಮೊಮ್ಮಗನ ರಾಜಕೀಯ ಆಸಕ್ತಿ ನೋಡಿ ಬಹಳ ಖುಷಿಯಾಗಿದೆ. ಅವನಿಗೆ ಇನ್ನೂ 17 ವರ್ಷ. ರಾಜಕೀಯಕ್ಕೆ ಬರಲು ಬಹಳ ಸಮಯವಿದೆ. ನಾಮಪತ್ರ ಸಲ್ಲಿಕೆ, ಪ್ರಚಾರದ ಬಗ್ಗೆ ತಿಳಿಯಲು ನನ್ನ ಜೊತೆ ಬಂದಿದ್ದಾನೆ ಎಂದು ಸಿದ್ದರಾಮಯ್ಯ ಹೇಳಿದರು.