ಮೂಲ ಬಿಜೆಪಿಗರು ಹಾಲಿದ್ದಂತೆ, ಹೊರಗಿನಿಂದ ಬಂದವರು ಜೇನಿದ್ದಂತೆ : ಕೆ ಎಸ್ ಈಶ್ವರಪ್ಪ

Spread the love

ಬಾಗಲಕೋಟೆ: ರಾಜ್ಯದ ಬಿಜೆಪಿ ನಾಯಕರಲ್ಲಿ ಅಸಮಾಧಾನ ಎಂಬ ಪ್ರಶ್ನೆಯೇ ಇಲ್ಲ, ಇನ್ನೆರಡು ಮೂರು ದಿನಗಳಲ್ಲಿ ಕೇಂದ್ರದ ನಾಯಕರು ರಾಜ್ಯಕ್ಕೆ ಬಂದು ಅಸಮಾಧಾನ ಏನೇನಿದೆ ಎಂದು ತಿಳಿದುಕೊಂಡು ನಾಯಕರನ್ನು ಕರೆದು ಕೂರಿಸಿ ಚರ್ಚೆ ಮಾಡಿ ಬಗೆಹರಿಸುತ್ತಾರೆ. ಇಲ್ಲಿ ವಲಸಿಗರು, ಮೂಲದಿಂದಲೇ ಇರುವವರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹಿರಿಯ ನಾಯಕ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಬಾಗಲಕೋಟೆಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಹಾಲಿದ್ದಂತೆ.ಹೊಸಬರು ಬಂದು ಸೇರ್ಪಡೆಗೊಂಡವರು ಜೇನಿದ್ದಂತೆ. ಹಾಲು-ಜೇನು ಸೇರಿದರೆ ಎಷ್ಟು ಸವಿಯಿರುತ್ತದೆಯೋ ಹಾಗೆಯೇ ಇಡೀ ದೇಶದಲ್ಲಿ ಬಿಜೆಪಿಗೆ ಯಾರ್ಯಾರು ಬಂದು ಸೇರಿದ್ದಾರೆಯೋ ಅವರೆಲ್ಲರನ್ನೂ ಒಗ್ಗೂಡಿಸಿಕೊಂಡು ಒಟ್ಟಾಗಿದ್ದೇವೆಯೇ ವಿನಃ ಯಾವುದೇ ವಿಷಯದಲ್ಲಿಯೂ ಗೊಂದಲವಿಲ್ಲ, ಇನ್ನು ಒಂದೂವರೆ ವರ್ಷದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡಿ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.