ಧರ್ಮಾ ಜಲಾಶಯದ ಈ ಸೇತುವೆ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿ…..

Spread the love

ಮುಂಡಗೋಡ : ತಾಲೂಕಿನ ಧರ್ಮಾ ಜಲಾಶಯ ಭಾರೀ ಮಳೆಗೆ ಭರ್ತಿಯಾಗುತ್ತಿದ್ದು ನೀರು ಬಿಡುಗಡೆ ಮಾಡಲು ಮಾಡಿದ ಸೇತುವೆ ಕುಸಿಯುವ ಹಂತಕ್ಕೆ ಬಂದು ತಲುಪಿದೆ.ಇದರಿಂದ ಅಪಾಯವಾಗುವ ಸಾಧ್ಯತೆಯಿದೆ. 

ಈ ಜಲಾಶಯಕ್ಕೆ ನೂರಾರು ಪ್ರವಾಸಿಗರು ಬರುತಿದ್ದು, ಇದೇ ಸೇತುವೆ ಮೇಲೆ ಹೋಗಿ ಗೇಟಿನ ಮೇಲೆ ನಿಂತು ಫೋಟೋ ಕ್ಲಿಕ್ಕಿಸುತ್ತಾರೆ. ಈಗೋ ಆಗೋ ಬೀಳುವ ಸ್ಥಿತಿಯಲ್ಲಿರುವ ಈ ಸೇತುವೆ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.