ಮುಂಡಗೋಡ : ಪಟ್ಟಣದ ಬಸವಣ್ಣನ ಹೊಂಡದಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬಳು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆಯೊಂದು ಇಂದು ಸಂಭವಿಸಿದೆ.
ಡಾ.ಅಂಬೇಡ್ಕರ್ ಓಣಿಯ ರುಕ್ಮಿಣಿ ವಡ್ಡರ ಎಂಬಾಕೆಯೇ ಮೃತಪಟ್ಟ ಮಹಿಳೆಯಾಗಿದ್ದಾಳೆ.
ಬಸವಣ್ಣ ಹೊಂಡಕ್ಕೆ ಮಹಿಳೆ ಬಿದ್ದಾಗಲೇ ಕೆಲವರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು. ತಕ್ಷಣವೇ ಪಿಎಸ್ಐ ಪರಶುರಾಮ ಹಾಗೂ ಪೊಲೀಸರು ಬಂದು ಮಹಿಳೆಯನ್ನು ಬಸವಣ್ಣ ಹೊಂಡದಿಂದ ಮೇಲೆಕ್ಕೆತ್ತಿ ಆಸ್ಪತ್ರೆಗೆ ಕಳಿಸಿದರಾದರೂ ಮಹಿಳೆಯ ಪ್ರಾಣ ಉಳಿಯಲಿಲ್ಲ ಎನ್ನಲಾಗಿದೆ.