ಧರ್ಮ ಜಲಾಶಯದಲ್ಲಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

Spread the love

ಮುಂಡಗೋಡ : ತಾಲೂಕಿನ ಧರ್ಮಾ ಜಲಾಶಯದಲ್ಲಿ ನಿನ್ನೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಇಂದು ಪತ್ತೆಯಾಗಿದೆ. 

ತಾಲೂಕಿನ ಮುಡಸಾಲಿ ಗ್ರಾಮದ ಶ್ರೀನಾಥ ಹರಿಜನ ಎಂಬಾತನೇ ಮೃತ ಯುವಕನಾಗಿದ್ದಾನೆ.
ತಾಲೂಕಿನ ಮಳಗಿ ಬಳಿಯ ಧರ್ಮಾ ಜಲಾಶಯದಲ್ಲಿ ನಿನ್ನೆ ಮುಡಸಾಲಿಯ ಶ್ರೀನಾಥ ಹರಿಜನ ಎಂಬ ಯುವಕ  ನೀರಿನಲ್ಲಿ ಮುಳುಗಿ ನಾಪತ್ತೆಯಾದರೆ ಮತ್ತೊಬ್ಬನನ್ನು ರಕ್ಷಿಸಿದ ಘಟನೆ ನಡೆದಿತ್ತು.
ನಾಪತ್ತೆಯಾದ  ಶ್ರೀನಾಥನಿಗಾಗಿ ತೀವ್ರ ಹುಡುಕಾಟ ನಿನ್ನೆ ನಡೆಸಲಾಗಿತ್ತು.

ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಶ್ರೀನಾಥ ಎಂಬ ಯುವಕನ ಶೋಧಕಾಗಿ ಪಿಎಸ್ಐ ಪರಶುರಾಮ್ ಹಾಗೂ ಪೊಲೀಸರು ತೀವ್ರ ಪ್ರಯತ್ನ ನಡೆಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.