ನ್ಯಾಯಬೆಲೆ ಅಂಗಡಿಯ ವಿತರಕರ ಮೇಲೆ ಹಲ್ಲೆ ಘಟನೆ : ಖಂಡನೆ

Spread the love

ಮುಂಡಗೋಡ : ಹಳಿಯಾಳ ತಾಲೂಕಿನ ಶಿವಪುರ ಗ್ರಾಮದ ನ್ಯಾಯಬೆಲೆ ಅಂಗಡಿಯ ವಿತರಕ ಬಸವರಾಜ ಹರಿಜನ ಎಂಬುವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಂಡಗೋಡ ತಾಲೂಕು ಪಡಿತರ ವಿತರಕರ ಸಂಘದವರು ಗ್ರೇಡ್ ೨ ತಹಶೀಲದಾರ ಜಿ.ಬಿ.ಭಟ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ‍್ಯದರ್ಶಿ ಶ್ರೀಧರ ಡೋರಿ, ರಾಜ್ಯ ಸಮಿತಿ ಸದಸ್ಯ ಸಿ.ಕೆ.ಅಶೋಕ, ರಾಧಾಕೃಷ್ಣ ರಾಯ್ಕರ, ಪಿ.ಡಿ.ನಾಯ್ಕ, ಕೆ.ಎನ್.ಕಲಾಲ, ರಾಮು ವೆರ್ಣೇಕರ, ರಾಮು ವಡ್ಡರ, ಬಿ.ಡಿ.ಹೊತಗಣ್ಣನವರ್ ಮುಂತಾದವರಿದ್ದರು.