ಬೆಂಗಳೂರು/ಹೊಸಪೇಟೆ : ಸಿಕ್ಕಿರುವ ಸಚಿವ ಸ್ಥಾನದಿಂದ ಅತೃಪ್ತಗೊಂಡಿರುವ ಸಚಿವ ಆನಂದ್ ಸಿಂಗ್ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದು, ಈ ನಡುವೆ ತಮ್ಮ ಸಚಿವ ಸ್ಥಾನಕ್ಕೆ ನಾಳೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದ್ದು, ಬಳಿಕ ತಮ್ಮ ಬೆಂಬಲಿಗರ ಜೊತೆಗೆ ಮಹತ್ವದ ಸಭೆಯನ್ನು ನಡೆಸಿದ ಬಳಿಕ ತಮ್ಮ ಶಾಸಕ ಸ್ಥಾನದ ಬಗ್ಗೆ ಕೂಡ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ನಾಳೆ ನೂತನ ಹೊಸಪೇಟೆ ಜಿಲ್ಲೆಯಲ್ಲಿ ನಡೆಯಲ್ಲಿರುವ ಸ್ವಾತಂತ್ರ್ಯ ದಿನಾಚರಣೆಯ ಧ್ವಜರೋಹಣವನ್ನು ಮಾಡಿ, ಬಳಿ ನೇರವಾಗಿ ಬೆಂಗಳೂರಿಗೆ ಬರುವ ಆನಂದ್ ಸಿಂಗ್ ಅವರು ಸಿಎಂ ಅವರನ್ನು ಭೇಟಿ ಮಾಡಿ, ತಮ್ಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ಗೆ ಕೈಕೊಟ್ಟು ಬಿಜೆಪಿಗೆ ಸೇರಿದ ಬಳಿಕ ಸಚಿವ ಸ್ಥಾನವನ್ನು ಪಡೆದುಕೊಂಡಿರುವ ಆನಂದ್ ಸಿಂಗ್ ಅವರು ಖುದ್ದು ತಮ್ಮ ಅಸಮಾಧವನ್ನು ಹೊರ ಹಾಕುತ್ತಿದ್ದು, ಮುಂದೆ ಇದು ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.