ಹನಿಗವನಗಳು

ಕೆಲಸ ಆಶ್ವಾಸನೆಗಳ ಕೊಡೋದಷ್ಟೇ ಅಲ್ಲ, ರಾಜಕಾರಣಿಗಳ ಕೆಲಸ, ಕೊಟ್ಟ ಆಶ್ವಾಸನೆಗಳ ಮರೆಯುವುದೂ ಅವರದೇ ಕೆಲಸ!     * * * * * ಕಟ್ಟೋಣ ಕಟ್ಟುವುದು ಬೇಡ ಅಲ್ಲಿ ಮಸೀದಿ ಮಂದಿರ, ಕಟ್ಟೋಣ ನಾವಿಲ್ಲಿ ಮನೋಮಂದಿರ, ಆದೀತು ಆಗ  ಈ ಜಗ  ಸುಂದರ. ~ ಶಿವಪ್ರಸಾದ ಹಾದಿಮನಿ, ಕೊಪ್ಪಳ

Read More

ಪ.ಪಂ. ಮುಖ್ಯಾಧಿಕಾರಿ ವರ್ಗಾವಣೆ

ಮುಂಡಗೋಡ : ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯ ಅವರಿಗೆ ಬೆಳಗಾವಿ ಜಿಲ್ಲೆಯ ಮುನವಳ್ಳಿ ಪುರಸಭೆಯ ಮುಖ್ಯಾಧಿಕಾರಿಯಾಗಿ ವರ್ಗಾವಣೆಯಾಗಿದೆ.     ಸಂಗನಬಸಯ್ಯ ಅವರು ಕಳೆದ 6 ವರ್ಷದಿಂದ ಮುಂಡಗೋಡ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಯಾಗಿ ಉತತಮವಾಗಿ ಕಾರ್ಯ ನಿರ್ವಹಿಸಿ ಜನಮನ್ನಣೆ ಗಳಿಸಿದ್ದಾರೆ.

Read More

ಮೀನುಗಾರರಿಗೆ ಸಲಕರಣೆ ಕಿಟ್ ವಿತರಣೆ

ಮುಂಡಗೋಡ : 15 ಜನ ಮೀನುಗಾರರಿಗೆ ಇಂದು ಮೀನು ಹಿಡಿಯುವ ಸಲಕರಣೆಗಳ ಉಚಿತ ಕಿಟ್ ನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ವಿತರಿಸಿದರು.     ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯರಾದ ಎಲ್. ಟಿ.ಪಾಟೀಲ್ , ರವಿ ಗೌಡ ಪಾಟೀಲ್, ಮುಖಂಡರಾದ ಫಣಿರಾಜ ಹದಳಗಿ, ಗುಡ್ಡಪ್ಪಾ ಕಾತೂರ, ತಾಲೂಕಾ ಬಿ.ಜೆ.ಪಿ. ಅಧ್ಯಕ್ಷ ನಾಗಭೂಷಣ ಹಾವಣಗಿ, ಪ.ಪಂ. ಉಪಾಧ್ಯಕ್ಷ ಮಂಜುನಾಥ ಹರಮಲಕರ, ಉಮೇಶ ಬಿಜಾಪುರ, ಅಲ್ಲಿಖಾನ ಪಠಾಣ, ಸಹಾಯಕ ಮೀನುಗಾರಿಕಾ ನಿರ್ದೇ‍ಶಕ ವೈಭವ ಮುಂತಾದವರಿದ್ದರು.

Read More

ಹೆಬ್ಬಾರ್ ರೇಶನ್ ಕಿಟ್ ವಿತರಣೆ

ಮುಂಡಗೋಡ : ಈಗ ನೀವು ಸಂಕಷ್ಟದಲ್ಲಿದ್ದಾಗ ಭಾಗಿಯಾಗುವುದು ನನ್ನ ಕರ್ತವ್ಯ. ಅದಕ್ಕಾಗಿ 63ಸಾವಿರ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‍ದಾರರಿಗೆ ದಿನಸಿ ಕಿಟ್‍ಗಳನ್ನು ಸ್ವಂತ ಖರ್ಚಿನಿಂದ ನೀಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಇಂದು ಹೇಳಿದರು.     ಅವರು ಮುಂಡಗೋಡ ನಗರದಲ್ಲಿ ಹೆಬ್ಬಾರ ರೇಶನ ಕಿಟ್‍ಗಳನ್ನು ವಿತರಿಸಿ ಮಾತನಾಡುತ್ತಿದ್ದರು.  ಯಾವದೇ ಜಾತಿ ಮತ, ಪಕ್ಷ ಬೇಧ ಭಾವವಿಲ್ಲದೇ ಎಲ್ಲ ಬಿಪಿಎಲ್ ಕಾರ್ಡ್‍ದಾರರಿಗೂ ಕಿಟ್‍ಗಳನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.    ಈ ಸಂದರ್ಭದಲ್ಲಿ…

Read More

ಕ್ರಿಮಿನಾಶಕ ಸೇವಿಸಿ ರೈತನ ಆತ್ಮಹತ್ಯೆ

ಮುಂಡಗೋಡ: ರೈತನೊಬ್ಬ ಬೆಳೆ ಬೆಳೆಯಲು ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಸಾಧ್ಯವಾಗದೆ ಬೇಸರದಲ್ಲಿದ್ದ ರೈತ ಮದ್ಯ ಕುಡಿದ ನಶೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ಜರುಗಿದೆ. ಮುಡಸಾಲಿ ಗ್ರಾಮದ ಪ್ರಭು ತಿಪ್ಪಣ್ಣ ಬೆಡಸಗಾಂವ(50) ಎಂಬವನೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಈತ ಎರಡುಲಕ್ಷ ಐವತ್ತುಸಾವಿರಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದು ಈ ವಿಷಯದಲ್ಲಿ ಬೇಸರಗೊಂಡಿದ್ದವನು. ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಶನಿವಾರ ಮದ್ಯ ಕುಡಿದ ನಶೆಯಲ್ಲಿದ್ದಾಗ ಯಾವುದೊ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥಗೊಂಡಿದ್ದನು….

Read More

ಗುಂಜಾವತಿ ಭಾಗದಲ್ಲಿ ಕಾಡಾನೆ ದಾಳಿ : ಕಬ್ಬು, ಅಡಕೆ ನಾಶ

ಮುಂಡಗೋಡ: ಪ್ರತಿವರ್ಷ ಅಕ್ಟೋಬರ, ನವೆಂಬರ್ ತಿಂಗಳಲ್ಲಿ ತಾಲೂಕಿಗೆ ಆಗಮಿಸುತ್ತಿದ್ದ ಕಾಡಾನೆಗಳ ಹಿಂಡು ಈ ಬಾರಿ ಜುಲೈ ತಿಂಗಳಲ್ಲಿಯೇ ಗುಂಜಾವತಿ ಭಾಗದಲ್ಲಿ ಆಗಮಿಸಿ,  ಬೆಳೆಗಳನ್ನು ಹಾಳು ಮಾಡುತ್ತಿದೆ. ಪ್ರತಿವರ್ಷ ಭತ್ತ ಹಾಗೂ ಗೋವಿನಜೋಳದ ಬೆಲೆ ಕಟಾವ್ ಹಂತಕ್ಕೆ ಬಂದಾಗ ದಾಂಡೇಲಿ ಭಾಗದಿಂದ ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ತಾಲೂಕಿಗೆ ಆಗಮಿಸಿ ಎರಡ್ಮೂರು ತಿಂಗಳ ಕಾಲ ತಾಲೂಕಿನ ವಿವಿಧಡೆ ಸಂಚರಿಸಿ ಮರಳಿ ಹೋಗುತ್ತಿದ್ದವು. ಆದರೆ ಈ ವರ್ಷಎಂಟು ಕಾಡಾನೆಗಳ ತಂಡ ಕಳೆದ ಎರಡುದಿನಗಳಿಂದ ತಾಲೂಕಿನ ಗುಂಜಾವತಿ ಭಾಗದಲ್ಲಿ ಬೀಡು ಬಿಟ್ಟಿವೆ. ಕಬ್ಬು ಹಾಗೂ…

Read More