ಪೊಲೀಸ್ ಮನೆ ಆವರಣದಲ್ಲಿ ಹಾವು ಪ್ರತ್ಯಕ್ಷ

Spread the love

ದಾಂಡೇಲಿ : ನಾಗರ ಪಂಚಮಿಯ ದಿನದಂದೆ ಪೊಲೀಸ್ ಸಿಬ್ಬಂದಿ ಮಹಾದೇವ ಮನೆಯ ಆವರಣಕ್ಕೆ ಹಾವು ಕಾಣಿಸಿಕೊಂಡಿತು.

ಹಾವು ನೋಡಿದ ಅವರ ಪುಟ್ಟ ಮಗ ಅಥರ್ವ ಕಿರುಚಾಡಿ, ಅಲ್ಲೆ ಇದ್ದ ತಂದೆ ಮಹಾದೇವ ಅವರ ಗಮನಕ್ಕೆ ತಂದಿದ್ದಾನೆ. ಅವರು ಉರಗ ಪ್ರೇಮಿ ರಾಘವೇಂದ್ರ.ವಿ.ನಾಯಕ ಅವರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಉರತ ತಜ್ಞ ರಾಘವೇಂದ್ರ ಸುರಕ್ಷಿತವಾಗಿ ಹಾವನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ. ರಾಘವೇಂದ್ರವರ ಈ ಕಾರ್ಯಕ್ಕೆ ಮಹಾದೇವ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.