ವಿವಾಹಿತ ಮಹಿಳೆ ಆತ್ಮಹತ್ಯೆ : ಗಂಡ, ಅತ್ತೆ ಮೇಲೆ ಪ್ರಕರಣ ದಾಖಲು
ಮುಂಡಗೋಡ: ವಿವಾಹಿತ ಮಹಿಳೆಯೊಬ್ಬಳು ಮನನೊಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಜರುಗಿದೆ. ಸ್ವಾತಿ ಮಂಜುನಾಥ ಹೊಸೂರ (26) ಎಂಬವಳೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಯಾಗಿದ್ದಾಳೆ. ಸ್ವಾತಿ ಮದುವೆಯಲ್ಲಿ ವರದಕ್ಷಿಣೆಯನ್ನು ನೀಡಿಲ್ಲ ಹಾಗೂ ಗಂಡು ಮಕ್ಕಳು ಸಹ ಜನಿಸಿಲ್ಲ ಎಂದು ಸ್ವಾತಿಯ ಗಂಡ ಮಂಜುನಾಥ ಹೊಸೂರ ಹಾಗೂ ತಾಯವ್ವ ಕಲ್ಲಪ್ಪ ಹೊಸೂರ ಎಂಬವರು ಸೇರಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾ ಬಂದಿದ್ದು ಇದರಿಂದ ಮನನೊಂದ ನನ್ನ ಮಗಳು…
ಕೋಗಿಲಬನದ ರಸ್ತೆಯಲ್ಲಿ ರಾಜಾರೋಷವಾಗಿ ತಿರುಗಾಡಿದ ಮೊಸಳೆ
ದಾಂಡೇಲಿ : ದಾಂಡೇಲಿಯ ಕಾಳಿ ನದಿಯ ಕೋಗಿಲಬನದ ರಸ್ತೆಯಲ್ಲಿ ಇಂದು ದೊಡ್ಡದಾದ ಮೊಸಳೆಯೊಂದು ಆಹಾರ ಅರಸಿ ಬಂದು ರಾಜಾರೋಷವಾಗಿ ತಿರುಗಾಡುತ್ತಿತ್ತು. ಆಗಾಗ ಬಾಯ್ದೆರೆದು ಹೆದರಿಸುತ್ತಿತ್ತು. ಮೊಸಳೆಯ ಈ ಸಂಚಾರ ಜನರನ್ನು ಭಯ ಬೀಳಿಸಿತ್ತು. ರಸ್ತೆಯ ಅಕ್ಕ ಪಕ್ಕದ ಮನೆಯವರು ಬಾಗಿಲು ಹಾಕಿಕೊಂಡು ಮನೆಯೊಳಗೆ ಸೇರಿದ್ದರು. ಕೆಲವರು ಮರದಿಂದಲೇ ವಿಡಿಯೋ ಮಾಡುತ್ತಿದ್ದರು. ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಆ ಮೊಸಳೆಯನ್ನು ಕಾಳಿನದಿಗೆ ಹೊಂದಿಕೊಂಡಿದ್ದ ನಾಲಾದೊಳಗೆ ಸೇರುವ ಹಾಗೆ ಮಾಡಿದರು. ಮನೆಯೆದುರು ಬಂದು ಜನರನ್ನು ಭಯ…
ನೀರು ಸೇದಲು ಹೋಗಿ ತೆರೆದ ಬಾವಿ ಬಿದ್ದ ವೃದ್ದೆಯ ರಕ್ಷಣೆ
ಭಟ್ಕಳ : ತೆರೆದ ಬಾವಿಯಲ್ಲಿ ನೀರು ಸೇದಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ವೃದ್ಧೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಭಟ್ಕಳ ತಾಲೂಕಿನ ಸೋಡಿಗದ್ದೆಯಲ್ಲಿ ಇಂದು ನಡೆದಿದೆ. ಸೋಡಿಗದ್ದೆ ನಿವಾಸಿಯಾಗಿರುವ ನಾಗಮ್ಮ (60) ತನ್ನ ಮನೆಯ ತೆರೆದ ಬಾವಿಯಿಂದ ನೀರು ಸೇದುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿದ್ದು, ತಕ್ಷಣ ವಿಷಯ ತಿಳಿದ ಮನೆಯವರು ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ.ತಕ್ಷಣ ಕರೆಗೆ ಸ್ಪಂದಿಸಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ…
ಶಿರಸಿ : ಅಪಘಾತ, ಬೈಕ್ ಸವಾರ ಸಾವು
ಶಿರಸಿ : ಬೈಕ್ ಸ್ಕಿಡ್ ಆಗಿ ಪಿಕಪ್ ಗೆ ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನೋರ್ವ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಿರೇಕೈಗದ್ದೆ ತಿರುವಿನಲ್ಲಿ ಇಂದು ಸಂಭವಿಸಿದೆ. ಬೈಕಿನಲ್ಲಿ ಶಿರಸಿಯಿಂದ ಹೆಗಡೆಕಟ್ಟಾ ಸಂಚರಿಸುವ ಸಂದರ್ಭದಲ್ಲಿ ಅಜಾಗರೂಕತೆ ಚಾಲನೆಯಿಂದ ಈ ಘಟನೆ ಸಂಭವಿಸಿದೆ. ಬೈಕ್ ನಲ್ಲಿ ಹಿಂಬದಿ ಕುಳಿತಿದ್ದ ಮಹಿಳೆಗೆ ಗಾಯಗಳಾಗಿವೆ. ಬೈಕ್ ನಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿದ್ದು,ಬೈಕ್ ನ್ನು ನಿಯಂತ್ರಿಸಲಾಗದೆ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಸಂಭವಿಸಿದೆ. ಈ…
ಅಧ್ಯಕ್ಷರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು
ಮುಂಡಗೋಡ : ಕಳೆದ 3 ತಿಂಗಳಿಂದ ಸಾಮಾನ್ಯ ಸಭೆ ನಡೆದಿಲ್ಲ. ಆದರೇ ಇಂದಿನ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಗಮನಕ್ಕೆ ತರದೇ ಕ್ರಿಯಾ ಯೋಜನೆ ಮಾಡಲು ಈಗ ಸಭೆಯಲ್ಲಿ ಮಂಡಿಸಲು ಹೊರಟಿದ್ದಾರೆ ಎಂದು p. ಪ.ಪಂ.ಉಪಾಧ್ಯಕ್ಷರಾದ ಮಂಜುನಾಥ ಹರಮಲಕರ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ ಲಮಾಣಿ ಅವರು ಪ.ಪಂ. ಅಧ್ಯಕ್ಷರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 2021-22 ನೇ ಸಾಲಿನ ಎಸ್.ಎಫ್ ಸಿ ಮುಕ್ತ ನಿಧಿಯಡಿಯಲ್ಲಿ ಹಣ ನಿಗಧಿಯಾದ 30ಲಕ್ಷರೂ. ಕ್ರಿಯಾ ಯೋಜನೆಯಲ್ಲಿ ಪ.ಪಂ….