ಬಸಾಪುರದಲ್ಲಿ ರೈತನ ಆತ್ಮಹತ್ಯೆ
ಮುಂಡಗೋಡ : ಬೆಳೆ ಸರಿಯಾಗಿ ಬಂದಿಲ್ಲವೆಂದು ಮನನೊಂದು ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ತಾಲೂಕಿನ ಬಸಾಪುರದಲ್ಲಿ ಇಂದು ಸಂಭವಿಸಿದೆ. ಬಸಾಪುರ ಗ್ರಾಮದ ಗಂಗಾರಾಮಸಿಂಗ ರಜಪೂತ(55) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಗಂಗಾರಾಮಸಿಂಗನು ತನ್ನ ಗದ್ದೆಯಲ್ಲಿ ಯಾವುದೋ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.