ಬೇಲಿಗೆ ಸೀರೆ ಹಾಕಿ ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಣೆ
ಮುಂಡಗೋಡ : ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ವಿಶೇಷವಾದ ಮಾರ್ಗವನ್ನು ಕಂಡು ಹಿಡಿಯುವ ಮೂಲಕ ತಮ್ಮ ಬೆಳೆಯನ್ನು ರಕ್ಷಣೆಗೆ ಮುಂದಾಗಿದ್ದಾರೆ.ತಾಲೂಕಿನ ರೈತರಿಗೆ ಭತ್ತದ ಪ್ರಮುಖ ಬೆಳೆಯಾಗಿದ್ದು ಬಹುತೇಕ ರೈತರು ಭತ್ತದ ಬೆಳೆಯ ನ್ನು ಬೆಳೆಯುತ್ತಾರೆ.ಆದರೆ ಮಳೆಯ ಏರುಪೇರಿನಿಂದ ಕೆಲ ವರ್ಷಗಳಿಂದ ತಾಲೂಕಿನ ರೈತರು ಗೋವಿನಜೋಳವನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಈ ಬಾರಿ ತಾಲೂಕಿನಲ್ಲಿ ಐದುಸಾವಿರ ಹೆಕ್ಟರಗೂ ಅಧಿಕ ಪ್ರದೇಶದಲ್ಲಿ ಗೋವಿನಜೋಳ ಬೆಳೆ ಬೆಳೆಯಲಾಗಿದೆ.ಗೋವಿನಜೋಳ ಬೆಳೆಗಾರರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಗದ್ದೆಯ ಸುತ್ತಲು ಬೇಲಿಯನ್ನು ಹಾಕುತ್ತಾರೆ….